ಉಪ ಅಂಚೆ ಕಚೇರಿಗಳ ಪುನರಾರಂಭಕ್ಕೆ ಮಾನವ ಹಕ್ಕುಗಳ ಸಂಘಟನೆ ಮನವಿ

ಸ್ವಂತ ಕಟ್ಟಡ ಇಲ್ಲ ಎಂಬ ಕಾರಣ ನೀಡಿ ಸ್ಥಗಿತಗೊಳಿಸಿರುವ ದಾಂಡೇಲಿಯ ಕುಳಗಿ ರಸ್ತೆ, ಹಳೆ ದಾಂಡೇಲಿ, ಹಾಗೂ ಬಂಗೂರನಗರ ಅಂಚೆ ಕಚೇರಿಗಳನ್ನು ಪುನರಾರಂಭಗೊಳಿಸುವಂತೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕಳೆದ 50 ವರ್ಷಗಳಿಂದ ದಾಂಡೇಲಿಯಲ್ಲಿ ಈ ಉಪ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ ಬಹಳಷ್ಟು ಅನುಕೂಲಕರವಾಗಿವೆ. ವಯೋವೃದ್ದರು, ಅಂಗವಿಕಲರಿಗೆ ಸ್ಥಳೀಯವಾಗಿ ಅಂಚೆ ಇಲಾಖೆ ಸೇವೆ ಪಡೆಯಲು ಈ ಉಪ ಕೇಂದ್ರಗಳು ಸಹಾಯಕವಾಗಿವೆ. ಆದರೆ ಅವೈಜ್ಞಾನಿಕವಾದ ಕಾರಣವನ್ನು ನೀಡಿ ಉಪ ಕೇಂದ್ರಗಳನ್ನ ಸ್ಥಳಾಂತರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ.

ಉಪ ಅಂಚೆ ಕಚೇರಿಗಳಿಂದ ಭರ್ಚಿ ರಸ್ತೆಯಲ್ಲಿರುವ ಕೇಂದ್ರ ಕಚೇರಿ ಸುಮಾರು 3 ಕಿ.ಮಿ.ಗೂ ಹೆಚ್ಚಿನ ದೂರದಲ್ಲಿರುತ್ತದೆ. ಅಂಚೆ ಗ್ರಾಹಕರಿಗೆ ಇದು ಬಹಳ ಸಮಸ್ಯೆಯಾಗುತ್ತದೆ. ವೆಚ್ಚದಾಯಕವಾಗುತ್ತದೆ. ಹಾಗಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಉಪ ಅಂಚೆ ಕಚೇರಿಗಳನ್ನು ಇದ್ದ ಸ್ಥಳದಲ್ಲಿಯೇ ಮುಂದುವರಿಸುವಂತೆ ಅಂಚೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ರಾಜ್ಯ ನಿರ್ದೇಶಕರಾದ ಫಿರೋಜ ಫೀರ್ಜಾದೆ, ಪ್ರಮುಖರಾದ ವಿ.ಕೆ. ಸಿಂಗ್, ಶಾಮ ಬೆಮನಗಳೂರ, ಈರಯ್ಯ ಪೂಜಾರ, ದಾದಾಪೀರ, ಲಕ್ಷ್ಮಿ‌ ಉಪ್ಪಾರ, ಸಂಗೀತಾ ಆಂಬ್ರೆ, ಪ್ರಭಾವತಿ‌ ನಾಯ್ಕ. ಮುಂತಾದವರಿದ್ದರು.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*