ಉತ್ತರ ಕನ್ನಡ
ಶಿಕ್ಷಣ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಕುಮಟಾದ ಈಶ್ವರ ನಾಯ್ಕ
ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದಿತು! ಎಂಬ ಹಿರಿದಾದ ಮಾತೊಂಗಿದೆ. ಯಾರು ಸೃಜನಶೀಲ ಮನಸ್ಥಿತಿಯುಳ್ಳವರೋ, ಕ್ರಿಯಾಶೀಲ ಪ್ರವೃತ್ತಿ ಹೊಂದಿರುತ್ತಾರೊ, ಕರ್ತವ್ಯವೇ ದೇವರೆಂದು ನಂಬಿ ನಡೆಯುತ್ತಾ ಇತರರ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೋ ಅಂಥವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾದವರು ಈಶ್ವರ ನಾಯ್ಕರವರು. ವೃತ್ತಿ ಬದುಕಿನಲ್ಲಿ ಹಿರಿ-ಕಿರಿಯ ನೌಕರರನ್ನು ಸ್ನೇಹಿತರಿಂದು [...]