ಈ ಕ್ಷಣದ ಸುದ್ದಿ

ಪೊಲೀಸ್ ಅಧಿಕಾರಿಯ ಹೆಸರನ್ನೇ ಬಳಸಿಕೊಂಡು ಆನ್ ಲೈನ್ ವಂಚನೆ : 30 ಸಾವಿರ ರು. ಕಳೆದುಕೊಂಡ ಕಾಗದ ಕಂಪನಿಯ ಅಧಿಕಾರಿ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ಹೆಸರನ್ನೇ ಬಳಸಿಕೊಂಡು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಹಿರಿಯ ಅಧಿಕಾರಿಯೋರ್ವರಿಗೆ ಆನ್ಲೈನ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ ವಂಚಕರು ತಾನು ಸಿ.ಆರ್.ಪಿ.ಎಪ್. (ಕೇಂದ್ರ ಮೀಸಲು ಪಡೆ) ಅಧಿಕಾರಿ […]

ಈ ಕ್ಷಣದ ಸುದ್ದಿ

ತ್ವರಿತ ಸೇವೆ, ಪಾರದರ್ಶಕ ಆಡಳಿತ: ಇ-ಆಫೀಸ್ ಆದ ದಾಂಡೇಲಿ ನಗರಸಭೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನ : ತಿಂಗಳೊಂದರಲ್ಲಿ 400 ಅರ್ಜಿಗಳ ವಿಲೇವಾರಿ ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ದಾಖಲೆಗಳ ಸುಲಭ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ದಾಂಡೇಲಿ ನಗರಸಭೆಯಲ್ಲಿ ಇ-ಆಫೀಸ್‌ ವ್ಯವಸ್ಥೆ ಜಾರಿಗೊಂಡಿದ್ದು, ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ಬಂದಿರುವ ಮೊದಲ ಡಿಜಿಟಲ್ ವ್ಯವಸ್ಥೆ […]

ಈ ಕ್ಷಣದ ಸುದ್ದಿ

ಕಾರವಾರ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹೊನ್ನಾವರದ ಎಂ. ಜಿ. ನಾಯ್ಕ

ಸಂಘಟನೆ ಎಂಬುದು ಉಂಡು ಬಿಸಾಕಿದ ಎಲೆಯಂತೆ ಅಲ್ಲ! ಉಣ್ಣಲು ಯೋಗ್ಯವಾದ ಆಹಾರ ತಯಾರಿಸಿದಂತೆ.ಉಂಡವರು ಹರಸಬೇಕು, ಉಂಡವರು ಖುಷಿ ಪಡಬೇಕು. ಸಂಘಟನೆ ಎಂಬುದು ಹಾಗೆ!ಹಲವರು ಮೂಗು ಮುರಿದಾಗಲೂ, ಕೆಲವರು ತೋಳು ಏರಿಸಿದಾಗಲೂ, ಕೆಲವರ ಕುಚೋದ್ಯೆ ಮಾತುಗಳನ್ನು ತಲೆಗೆ ಏರಿಸಿಕೊಳ್ಳದೆ ಹೃದಯದಲ್ಲಿ ಬಚ್ಚಿಟ್ಟು ಅವರನ್ನು ಸಂತೈಸಿ ಅವರ ಪ್ರೀತಿ ಗಳಿಸಿ ಇನ್ನುಳಿದವರಿಗೆ […]

ಈ ಕ್ಷಣದ ಸುದ್ದಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತೀಶ ನಾಯಕ, ಬಾವಿಕೇರಿ

ಹಳಿಯಾಳ : ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಳಿಯಾಳದ ಕ್ರಿಯಾಶೀಲ ಸಂಘಟಕ, ಆದರ್ಶ ಶಿಕ್ಷಕ ಸತೀಶ ನಾಯಕ, ಭಾವಿಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬಿರುಸುಗಳಿತ್ತಾದ್ದಾದರೂ ಅಂತಿಮವಾಗಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಇವರ ಜೊತೆಗೆ ಉಪಾಧ್ಯಕ್ಷರು, […]

ಈ ಕ್ಷಣದ ಸುದ್ದಿ

ವರ್ಷಕ್ಕೆ ಶೇ.36 ಬಡ್ಡಿಯ ಆಸೆಗೆ ಬಿದ್ದು ಶಿವಂ ಅಸೋಸಿಯೇಟ್ಸ್ ನಲ್ಲಿ ಹಣ ತೊಡಗಿಸಿದ ದಾಂಡೇಲಿಗರು!?

ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಬೆಳಗಾವಿಯ ಶಿವಾನಂದ್ ನೀಲಣ್ಣವರ್ ನೇತೃತ್ವದ ಶಿವಂ ಅಸೋಶಿಯೇಟ್ಸ್ ನ ಹಣ ಹೂಡಿಕೆ ವ್ಯವಹಾರದಲ್ಲಿ ಇದೀಗ ಕೆಲವು ದಾಂಡಲಿಗರು ಕೂಡ ಹಣ ಹೂಡಿಕೆ ಮಾಡಿ ಆತಂಕದಲ್ಲಿರುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ ಹೆಸರಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ, […]

ಈ ಕ್ಷಣದ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೫ನೆಯ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದ್ದು, 2025 ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳಾದ ಕೆ.ಎ. ದಯಾನಂದ, (ಭಾ.ಆ.ಸೇ.) […]

ಅಂತಾರಾಷ್ಟ್ರೀಯ

ಕಾಳಿನದಿ ದಂಡೆಯಲ್ಲಿ 40 ಮೊಸಳೆ‌ ಮರಿಗಳು: ತಾಯಿ ಮೊಸಳೆಯಿಂದ ಕಾವಲು

ಅಲ್ಲಿ ಅದೆಷ್ಟು ಮೊಸಳೆ ಮರಿಗಳಿವೆಯೆಂದು ಲೆಕ್ಕ ಹಾಕಲು ಹೋದರೆ ಲೆಕ್ಕವೇ ತಪ್ಪಿ ಹೋಗುತ್ತದೆ. ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 40 ಕ್ಕೂ ಹೆಚ್ಚು ಮೊಸಳೆ ಮರಿಗಳು… ನಂಬ್ತೀರಾ….? ನಂಬಲೇ ಬೇಕು. ಎಲ್ಲಿ ಗೊತ್ತಾ…. ದಾಂಡೇಲಿಯ ಲೋಕೋಪಯೋಗಿ ಪ್ರವಾಸಿಗೃಹದ ಹತ್ತಿರ, ಕಾಳಿ ನದಿ ದಂಡೆಯ ಮೇಲೆ…. ಮೊಸಳೆಯೊಂದು 40ಕ್ಕೂ ಹೆಚ್ಚು ಮೊಟ್ಟೆ […]

ಅಂತಾರಾಷ್ಟ್ರೀಯ

ರೋಹನ್ ಕಾಮತ್ ದಾಂಡೇಲಿಯ ಮೊದಲ ಪೈಲೆಟ್

ದಾಂಡೇಲಿ: ಇಲ್ಲಿಯ ಹಳೆ ದಾಂಡೇಲಿಯ ನಿವಾಸಿ ರೋಹನ್ ಸಚಿನ್ ಕಾಮತ್ ಇಂಡಿಗೋ ಪೈಲೆಟ್ ಆಗಿ ಆಯ್ಕೆಯಾಗಿದ್ದು, ಈ ಸಾಧನೆಯು ದಾಂಡೇಲಿಯ ಮೊದಲ ಪೈಲೆಟ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಹಳೇ ದಾಂಡೇಲಿಯ ಚಾರ್ಟೆಡ್ ಅಕೌಂಡೆಡ್ ಸಚಿನ್ ಕಾಮತ ಹಾಗೂ ಸಹನಾ ಕಾಮತರ ಪುತ್ರ ರೋಹನ್ ಕಾಮತ್ ದಾಂಡೇಲಿಯ ಸೆಂಟ್ ಮೈಕಲ್ […]

ಈ ಕ್ಷಣದ ಸುದ್ದಿ

ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ, ಮುತ್ಸದಿ ರಾಜನೀತಿಜ್ಞ ರಮಾನಂದ ನಾಯಕ ಇನ್ನಿಲ್ಲ

ಉತ್ತರಕನ್ನಡದ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಸರಳ ವ್ಯಕ್ತಿತ್ವದ, ಸಜ್ಜನಿಕೆಯ ರಾಜನೀತಿಜ್ಞ ಅಂಕೋಲಾದ ರಮಾನಂದ ನಾಯಕ ಹೃದಯಾಘಾತದಿಂದ ನಿಧನರಾಗಿದ್ದಾರೆ ತಮ್ಮ ಮಗನ ಮನೆ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿದ್ದ ರಮಾನಂದ ನಾಯಕರು ಗುರುವಾರ ನಸುಕಿನ ಜಾವ ಹೃದಯಗತಕ್ಕೊಳಗಾಗಿದ್ದಾರೆ. ಮೃತರು ಮಡದಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. […]

ಈ ಕ್ಷಣದ ಸುದ್ದಿ

ಸೈಬರ್ ವಂಚನೆ: ಹತ್ತು ಲಕ್ಷ ರು. ಕಳೆದುಕೊಂಡ ದಾಂಡೇಲಿಯ ದಿವಾಕರ

facebook ಜಾಹಿರಾತಿಗೆ ಮರುಳಾದ ದಂಪತಿ: ಪೊಲೀಸ್ ಠಾಣೆಯಲ್ಲಿ ದೂರು ದಾಂಡೇಲಿ: ಫೇಸ್ಬುಕ್ ಒಂದರಲ್ಲಿ ಬಂದ ಹಣ ತೊಡಗಿಸುವ ಕಂಪನಿಯ ಮಾತಿಗೆ ನಂಬಿ ದಾಂಡೇಲಿಯ ಸಾಯಿನಗರದ ನೌಕಾ ಸೇನೆಯ ನಿವೃತ್ತ ಅಧಿಕಾರಿಯೋರ್ವರು 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಾಂಧಿನಗರದ ದಿವಾಕರ್ ನಾರಾಯಣ ಎಂಬವರೇ ಸೈಬರ್ ವಂಚನೆಯಲ್ಲಿ […]