ಈ ಕ್ಷಣದ ಸುದ್ದಿ

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಿಂದ ಆಕ್ಸಿಜನ್ ಪ್ಲಾಂಟ್: ಕೊರೊನಾತಂಕದಲ್ಲಿ ದಾಂಡೇಲಿಗರಿಗೆ ಕಾಗದ ಕಂಪನಿಯ ಗಿಪ್ಟ್…

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಸರಿ ಸುಮಾರು 90 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ನಿರ್ಮಿಸುವ ಮೂಲಕ ಕೊರೊನಾತಂಕದ ಕಾಲದಲ್ಲಿ ದಾಂಡೇಲಿಯ ಜನರಿಗೆ ಅಮೂಲ್ಯವಾದ ಗಿಪ್ಟ್ ನ್ನು ನೀಡಿದ್ದಾರೆ. ಆಮೂಲಕ ಅವರ ಸಾಮಾಜಿಕ ಬದ್ದತೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ದಾಂಡೇಲಿಯ ಸರಕಾರಿ ಆಸ್ಪತ್ರೆಯ […]

ಈ ಕ್ಷಣದ ಸುದ್ದಿ

ನೊಂದಾಯಿತ ಎಲ್ಲಾ ಕಾರ್ಮಿಕರಿಗೂ ಸರಕಾರದ ಕಿಟ್ ಸಿಗುವಂತಾಗಲಿ: ದೇಶಪಾಂಡೆ

ಬೆವರ ಸುರಿಸಿಯೇ ಬದುಕು ಕಂಡುಕೊಳ್ಳುವ ಹಲವು ವಿಭಾಗದ ಕಾರ್ಮಿಕರೇ ಈ ದೇಶದ ನಿಜವಾದ ಆಧಾರಸ್ಥಂಬಗಳು. ಕಾರ್ಮಿಕರ ದುಡಿಮೆಯೇ ಈದೇಶವನ್ನು ಮುನ್ನಡೆಸುತ್ತಿದೆ. ಹಾಗಾಗಿ ಯಾವುದೇ ಕಾರ್ಮಿಕರೂ ಕೂಡಾ ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು. ಇದೀಗ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡುತ್ತಿರುವ ಕಿಟ್‍ಗಳೂ ಕೂಡಾ ನೊಂದಾಯಿತ ಎಲ್ಲಾ ಕಾರ್ಮಿರಿಗೂ ಸಿಗುವಂತಾಗಬೇಕು  ಎಂದು ಶಾಸಕ […]

ಈ ಕ್ಷಣದ ಸುದ್ದಿ

ದಾಂಡೇಲಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ದೇಶಪಾಂಡೆ

ಕಳೆದೆರಡು ದಿನಗಳ ಹಿಂದೆ  ಎಡಬಿಡದೇ ಸುರಿದ ಮಳೆ ಹಾಗೂ ತುಂಬಿ ಹರಿದ ಕಾಳಿ ನದಿಯಿಂದ ಹಾನಿಗೊಳಗಾದ ದಾಂಡೇಲಿಯ ಹಲವು ಸ್ಥಳಗಳಿಗೆ ರವಿವಾರ ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳ ಜೊತೆಯಲ್ಲಿ ಬೇಟಿ ನೀಡಿ ಪರಿಶೀಲಿಸಿದರು.   ತುಂಬಿ ಹರಿದ ಆಲೂರು ಕೆರೆ, ಕೆರವಾಡಾ ಕೆರೆಗಳನ್ನು ವೀಕ್ಷಿಸಿದ ಆರ್.ವಿ ದೇಶಪಾಂಡೆಯವರು ದಾಂಡೇಲಪ್ಪ […]

ಈ ಕ್ಷಣದ ಸುದ್ದಿ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ; ಜಾತ್ರೆ, ಉತ್ಸವಕ್ಕಿಲ್ಲ ಸಮ್ಮತಿ…!

ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ. ಆದರೆ ಜಾತ್ರೆ, ಹಾಗೂ ಉತ್ಸವ, ಮೆರವಣಿಗೆಗಳಿಗೆ ಸದ್ಯ ಸಮ್ಮತಿಯಿರುವುದಿಲ್ಲ. ರಾಜ್ಯದಲ್ಲಿ ಜು.19ರಿಂದ ಅನ್ಲಾಕ್ 4.0 ಜಾರಿಯಾಗಿತ್ತು. ನೈಟ್ ಕರ್ಫ್ಯೂವನ್ನು 1 ಗಂಟೆ ಕಡಿತಗೊಳಿಸಲಾಗಿತ್ತು. ಜೊತೆಗೆ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.ಇದೀಗ […]

ಈ ಕ್ಷಣದ ಸುದ್ದಿ

ಎಡ ಬಿಡದೇ ಸುರಿದ ಮಳೆ: ದಾಂಡೇಲಿಯಲ್ಲಿ ತುಂಬಿ ಹರಿದ ನದಿ-ನಾಲಾಗಳು: ಮನೆಗಳಿಗೆ ನುಗ್ಗಿದ ನೀರು: ಕಾಳಜಿ ಕೇಂದ್ರದಲ್ಲಿ ಸಂತ್ರಸ್ಥ ಜನರು

ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದಾಗಿ ದಾಂಡೇಲಿಯಲ್ಲಿ ಕಾಳಿ ನದಿ ಸೇರಿದಂತೆ ಸಣ್ಣ ಪುಟ್ಟ ನಾಲಾಗಳೂ ಸಹ ತುಂಬಿ ಹರಿದಿದ್ದು, ಮನೆಗಳೊಳಗೆ ನೀರು ನುಗ್ಗಿ ನೂರಾರು ಜನರು ಸಂಕಷ್ಠಕ್ಕೊಳಗಾಗಿದ್ದು ಸಂಜೆಯ ಹೊತ್ತಿಗೆ ವಾತಾವರಣ ಸಹಜ ಸ್ಥಿತಿಗೆ ಮರಳಿದೆ. ದಾಂಡೇಲಿಯಲ್ಲಿ ಗುರುವಾರದಿಂದಲೇ ಮಳೆ ನಿರಂತವಾಗಿ ಭೋರ್ಗರೆಯುತ್ತಿದೆ. ಪರಿಣಾಮವೆಂವಂತೆ ಜಲಪ್ರವಾಹವೇ […]

ಈ ಕ್ಷಣದ ಸುದ್ದಿ

ಪ್ರಸ್ತುತ ರಾಜಕಾರಣ: ಸನ್ಯಾಸಿಯ ಎದುರು ಹಾದು ಹೋದ ಜಿಂಕೆಯ ಕಥೆ ಹೇಳಿದ ಕೋಡಿಮಠದ ಶ್ರೀಗಳು

ಶಿರಸಿ,: ” ಜಿಂಕೆಯೊಂದು ಬೇಟೆಗಾರನಿಂದ ತಪ್ಪಿಸಿಕೊಂಡು  ಸನ್ಯಾಸಿಯೊಬ್ಬನ ಎದುರಿನಿಂದ ಹಾದು ಓಡಿಹೋಗಿತ್ತು. ಹಾಗೆ ಹಾದು ಹೋದ ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿರುತ್ತಾನೆ.  ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಆ ಜಿಂಕೆಯ ಸಾವಿಗೆ ಕಾರಣವಾದಂತಾಗುತ್ತದೆ, ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಯದ್ದಾಗಿರುತ್ತದೆ….”    […]

ಈ ಕ್ಷಣದ ಸುದ್ದಿ

ಕೆ.ಎಸ್.ಆರ್.ಟಿ.ಸಿ.ಯಿಂದ ದಾಂಡೇಲಿ-ಜೋಯಿಡಾ ಟೂರ್ ಪ್ಯಾಕೇಜ್

ದಾಂಡೇಲಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದಿಂದ ದಾಂಡೇಲಿ-ಜೋಯಿಡಾದ ಪ್ರವಾಸಕ್ಕಾಗಿ ವಿಶೇಷ ಟೂರ್ ಪ್ಯಾಕೇಜ್ ಪ್ರವಾಸ ಸೌಲಭ್ಯವನ್ನು ಘೋಷಣೆ ಮಾಡಿದೆ.ಮಳೆಗಾಲದ ಪ್ರಯುಕ್ತ ಜಲಧಾರೆಗಳ ವೀಕ್ಷಣೆ ಹಾಗೂ ದಾಂಡೇಲಿ ಜೋಯಿಡಾದ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ರಜಾ ದಿನಗಳಾದ ಜುಲೈ 21, 25, ಅಗಸ್ಟ್ 1, 8, 15, […]

ಈ ಕ್ಷಣದ ಸುದ್ದಿ

ಸರ್ಕಾರಿ ನೌಕರರಿಗೆ ಆಷಾಢದ ಉಡುಗೊರೆಯಿತ್ತ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು (ಜುಲೈ 20)ದಂದು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿದ್ದು, ಇದು ರಾಜ್ಯ ಸರಕಾರಿ ನೌಕರರಲ್ಲಿ ಸಂತಸ ಮೂಡಿಸಿದೆ. ಇದು ಸರಕಾರಿ ನೌಕರರಿಗೆ  ಆಷಾಢ ಮಾಸದಲ್ಲಿ ಸಿಕ್ಕ ಅನಿರೀಕ್ಷಿತ ಉಡುಗೊರೆ ಎಂದೇ ಹೇಳಲಾಗುತ್ತಿದೆ. ಜುಲೈ 1, 2021 […]

ಈ ಕ್ಷಣದ ಸುದ್ದಿ

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಮಹಿಳೆ ಯಾರು ಗೊತ್ತಾ…?

ಬೆಂಗಳೂರು: ಕರ್ನಾಟಕ ರಾಜ್ಯದ ಹಾಲಿ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಮೊಟ್ಟ ನೊದಲ ಬಾರಿ ಮಹಿಳೆಯೋರ್ವರು ಅಧಿಕಾರ ವಹಸಿಕೊಂಡದ್ದಾರೆ.  ಅವರು ಯಾರು ಗೊತ್ತಾ…? ಚಿತ್ರ ನಟಿ ಶೃತಿ. ಹೌದು  ಚಿತ್ರನಟಿ ಹಾಗೂ ಭಾ.ಜ.ಪ. ಮುಖಂಡೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜ್ಯ ಸರ್ಕಾರ ಈ […]

ಈ ಕ್ಷಣದ ಸುದ್ದಿ

ಮುಚ್ಚಳಿಕೆ, ಶರತ್ತುಗಳೊಂದಿಗೆ ಪುನರಾರಂಭಗೊಂಡ ಕಾಳಿ ವೈಟ್‍ ವಾಟರ್ ರಾಪ್ಟಿಂಗ್‍ : ಪ್ರವಾಸೋದ್ಯಮಿಗಳು, ಪ್ರವಾಸಿಗರಲ್ಲಿ ಹರ್ಷ …

ಕೊರೊನಾ ಇಳಿಕೆಯಾದ ನಂತರ ಪರವಾನಿಗೆಯಿಲ್ಲದೇ ಗಣೇಶಗುಡಿಯ ಕಾಳಿನದಿಯಲ್ಲಿ ಆರಂಭವಾಗಿದ್ದ ರ್ಯಾಪ್ಟಿಂಗ್ ಹಾಗೂ ಇತರೆ ಜಲ ಸಾಹಸ ಕ್ರೀಡೆಗಳಿಗಳಗೆ ಕಡಿವಾಣ ಹಾಕಿದ್ದ ಜಿಲ್ಲಾಡಳಿತ ಇದೀಗ ಸ್ಥಳೀಯ ಪ್ರವಾಸೋದ್ಯದ ಅನುಕೂಲತೆಗಾಗಿ ಮಾಲಕರಿಂದ ನಿಯಮ ಪಾಲನೆಯ ಮುಚ್ಚಳಿಕೆ ಪತ್ರ ಪಡೆದು ಕೆಲವು ಶರತ್ತುಗಳನ್ನು ವಿಧಿಸಿ ಜಲ ಸಾಹಸ ಕ್ರೀಡೆಗಳಗೆ ಸಮ್ಮತಿಸಿದೆ. ರವಿವಾರದಿಂದಲೇ ಈ […]