ವರ್ತಮಾನ

ದಾಂಡೇಲಿಯಲ್ಲಿ ಬುಧವಾರ ಮತ್ತೆರಡು ಕೊರೊನಾ ಪಾಸಿಟಿವ್

ದಾಂಡೇಲಿಯಲ್ಲಿ ಬುಧವಾರ ಮತ್ತೆರಡು ಕೊರೊನೊ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ಇದರಿಂದಾಗಿ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 17ಕ್ಕೆ ಏರಿದಂತಾಗಿದೆ. ಬುಧವಾರ ಸೋಂಕು ದೃಡವಾದವರು ಇಬ್ಬರೂ ಪಟೇಲ ನಗರದವರಾಗಿದ್ದಾರೆ. ಅಲ್ಲಿಯ 25 ವರ್ಷದ ಮಹಿಳೆ ಹಾಗೂ 35 ವರ್ಷದ ಪುರುಷನಲ್ಲಿ ಸೋಂಕು ದ್ರಢವಾಗಿದೆ. ಇನ್ನು ಬುಧವಾರ ಉತ್ತರ ಕನ್ನಡ ಜಿಲ್ಲೆಯ […]

ಫೀಚರ್

ದಾಂಡೇಲಿಯಲ್ಲಿ ಮಂಗಳವಾರ ಮತ್ತೊಂದು ಕೊರೊನಾ: ಜಿಲ್ಲೆಯಲ್ಲಿ 33 ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 33 ಕೊರೊನಾ ಪಾದಿಟಿವ್ ಪ್ರಕರಣ ದೃಢವಾಗಿದ್ದು, ಇದರಲ್ಲಿ ದಾಂಡೇಲಿಯದ್ದೂ ಒಂದು ಪ್ರಕರಣ ಸೇರಿದೆ. ನಗರದ ಹಳಿಯಾಳ ರಸ್ತೆಯ ಅಲೈಡ ಏರಿಯಾದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ದೃಢವಾಗಿರುವ ಮಾಹಿತಿ ಲಭ್ಯವಾಗಿದ್ದು, ಈತ ಗದಗದಿಂದ ಸೋಂಕಿತ ತಾಯಿ ಮಗುವನ್ನು ತನ್ನ ಖಾಸಗಿ ವಾಹನದಲ್ಲಿ ಕರೆತಂದಿದ್ದ ಸೋಂಕಿತ […]

ದಾಂಡೇಲಿ

ದಾಂಡೇಲಿ ಪ್ರೆಸ್‌ ಕ್ಲಬ್‌ಗೆ ನೂತನ ಸಾರಥಿಗಳು

ದಾಂಡೇಲಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಯೋಜಿತ ದಾಂಡೇಲಿ ಪ್ರೆಸ್‍ಕ್ಲಬ್‍ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ಕಾರ್ಯದರ್ಶಿಗಳಾಗಿ ಗುರುಶಾಂತ ಜಡೆಹಿರೇಮಠ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಪಿ. ಮಹೇಂದ್ರಕುಮಾರ, ಖಜಾಂಚಿಯಾಗಿ ಕೃಷ್ಣಾ ಪಾಟೀಲ, ಸದಸ್ಯರಾಗಿ ಬಿ.ಎನ್. ವಾಸರೆ, ಸಂದೇಶ ಜೈನ್ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ […]

ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ಇಂದು 80 ಪಾಸಿಟಿವ್: ದಾಂಡೇಲಿ ಸೇಫ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 80 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ದಾಂಡೇಲಿ ಸೇಪ್ ಆಗಿದೆ. ಜಿಲ್ಲೆಯ ಭಟ್ಕಳದಲ್ಲಿ 40, ಕುಮಟಾದಲ್ಲಿ 20, ಹೊನ್ನಾವರದಲ್ಲಿ 9, ಕಾರವಾರದಲ್ಲಿ 5, ಸೇರಿದಂತೆ 80 ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ ಹೆಚ್ಚಿನವರು ಹೊರ ದೇಶದಿಂದ ಮರಳಿದವರೇ ಹೆಚ್ಚಿನವರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ […]

ವರ್ತಮಾನ

ಅಗಲಿದ ಉದಯೋನ್ಮುಖ ನೃತ್ಯ ಗುರು ಅನಿಲ್ ಎಸ್.ಕೆ.

ದಾಂಡೇಲಿ: ನಗರದ ಉದಯೋನ್ಮುಖ ನೃತ್ಯ ಗುರು, ಕಲಾವಿದ ಅನಿಲ್ ಎಸ್.ಕೆ. (40) ರವಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ನಗರದಲ್ಲಿ ತನ್ನದೇ ಆದ ನೃತ್ಯ ಆಕಾಡೆಮಿ ಪ್ರಾರಂಭಿಸಿದ್ದ ನೂರಾರು ಶಿಷ್ಯರನ್ನು ಹೊಂದಿದ್ದರು. ಹಲೆವೆಡೆ ನೃತ್ಯ ಪ್ರದರ್ಶನ ನೀಡಿದ್ದ ಇವರು ಬಹುಮಾನವನ್ನೂ ಪಡೆದಿದ್ದರು. ಸಾಹಸಮಯ ನೃತ್ಯ ಪ್ರದರ್ಶನಕ್ಕೆ ಪ್ರಾವೀಣ್ಯತೆ ಹೊಂದಿದ್ದರು. ಸರಳ ವ್ಯಕ್ತಿತ್ವದ […]

ಫೀಚರ್

ದಾಂಡೇಲಿಯಲ್ಲಿ 500 ರ ಗಡಿ ದಾಟಿದ ಹಳದಿ ಕಾಮಾಲೆ ಪೀಡಿತರು: ಆತಂಕದಲ್ಲಿ ಸಾರ್ವಜನಿಕರು

ದಾಂಡೇಲಿ:  ನಗರದಲ್ಲಿ ದಿನದಿಂದ ದಿನಕ್ಕೆ ಹಳದಿ ಕಾಮಾಲೆಯ ಸೋಂಕು ಹೆಚ್ಚುತ್ತಿದ್ದು,  ಇಲಾಖಾ ವರದಿಯ ಪ್ರಕಾರವೇ ರವಿವಾರದವರೆಗೆ ದಾಂಡೇಲಿಯಲ್ಲಿ ಕಾಮಾಲೆ ಪೀಡಿತರ ಸಂಖ್ಯೆ  500ರ ಗಡಿಯನ್ನು ದಾಟಿದೆ.  ಇದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.           ಕಳೆದೊಂದು ತಿಂಗಳಿನಿಂದ ದಾಂಡೇಲಿಯಲ್ಲಿ ಕಾಮಾಲೆಯ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮಾದ್ಯಮಗಳು ವರದಿ […]

ದಾಂಡೇಲಿ

ಸೀಲ್‌ಡೌನ್‌ ಆದ ದಾಂಡೇಲಿಯ ಇ.ಎಸ್.ಐ. ಆಸ್ಪತ್ರೆ

  ದಾಂಡೇಲಿ: ಇಲ್ಲಿಯ ಬಸವೇಶ್ವರ ನಗರದ ಕೊರೊನಾ ಸೊಂಕಿತ ಮಹಿಳೆಯ ಪತಿ ಕಾರ್ಮಿಕರ ವಿಮಾ ಆಸ್ಪತ್ರೆ (ಇ.ಎಸ್.ಐ) ಯಲ್ಲಿ ಗುಮಾಸ್ತನಾಗಿದ್ದ ಕಾರಣಕ್ಕೆ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ರವಿವಾರ ಬಸವೇಶ್ವರ ನಗರದ ಗರ್ಬಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಕೊರೊನಾ ಸೋಂಕಿತ  25 ವರ್ಷ  ಗರ್ಬಿಣಿಯ ಪತಿ ನಗರದ ಕಾರ್ಮಿಕರ […]

ದಾಂಡೇಲಿ

ತೈಲ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಕಾಂಗ್ರೆಸ್ ಪ್ರತಿಭಟನೆ: ರಾಷ್ಟ್ರಪತಿಗಳಿಗೆ ಮನವಿ

ದಾಂಡೇಲಿ:  ಕೊವಿಡ್ 19 ನಂತಹ ಸಂಕಷ್ಠದ ಸಮಯದಲ್ಲಿಯೂ ಕೇಂದ್ರ ಸರಕಾರ ಪೆಟ್ರೋಲ್, ಡೀಸೈಲ್ ಬೆಲೆಯನ್ನು ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ಷೇಪಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರಸಭೆ ಕಾರ್ಯಲಯದೆದುರು ಪ್ರತಿಭಟನೆ ನಡೆಯಿತು.      ಸರಕಾರದ ತೈಲ ಬೆಲೆ ಏರಿಕೆಯ ನಡೆಯನ್ನು ಖಂಡಿಸಿ […]

ಫೀಚರ್

ದಾಂಡೇಲಿಯ ಗರ್ಭಿಣಿ ಹಾಗೂ ಚಾಲಕನಲ್ಲಿ ಕೊರೊನಾ ಪಾಸಿಟಿವ್….

ದಾಂಡೇಲಿ: ದಾಂಡೇಲಿಯ ಬಸವೇಶ್ವರ ನಗರದ 25 ವರ್ಷದ ಗರ್ಭಿಣಿ ಮಹಿಳೆ ಹಾಗೂ ಹಳಿಯಾಳ ರಸ್ತೆ ಅಲೈಡ ಏರಿಯಾದ 50 ವರ್ಷದ ಚಾಲಕನಲ್ಲಿ ಭಾನುವಾರ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಸವೇಶ್ವರ ನಗರದ ಮಹಿಳೆ ಚಿಕುತ್ಸೆಗೆಂದು ಧಾರವಾಡ ಆಸ್ಪತ್ರೆಗೆ ಹೋಗಿ ಬಂದವಳಾಗಿದ್ದು, ಅಲ್ಲಿಯೇ ನಡೆಸಿದ ಪರೀಕ್ಷೆಯಂತೆ ಅವಳಲ್ಲಿ ಕೊರೊನಾ ಸೋಂಕು […]

ವರ್ತಮಾನ

ದಾಂಡೇಲಿ ರೋಟರಿಗೆ ನೂತನ ಸಾರಥಿಗಳು

ದಾಂಡೇಲಿ: ನಗದ ರೋಟರಿ ಕ್ಲಬ್‍ನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯು.ಡಿ. ನಾಯ್ಕರು ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಗಳಾಗಿ ಪ್ರಕಾಶ ಕಣ್ವೇಹಳಿ ಆಯ್ಕೆಯಾದರೆ ಖಜಾಂಚಿಯಾಗಿ ಸುಧಾಕರ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಗಣೇಶ ಕಾಮತ, ಮುಂಬರುವ ವರ್ಷದ ನಿಯೋಜಿತ ಅಧ್ಯಕ್ಷರಾಗಿ ರಾಜಕುಮಾರ ಕಾಮತ, ಸಹ ಸಲೀಂ ಅಂಕೋಲೆಕರ್ […]