ಒಡನಾಡಿ ವಿಶೇಷ

ಪ್ರಯೋಗಶೀಲ, ಪ್ರತಿಭಾವಂತ ಶಿಕ್ಷಕ ಪಿ.ಆರ್.‌ ನಾಯ್ಕ

ಈ ಮತ್ಸರ ಎನ್ನುವುದು ಪ್ರತಿಯೊಬ್ಬನಿಗೂ ಅಂಟಿದ ಮಹಾಶಾಪ. ತನಗಿಲ್ಲ ತನಗಿಲ್ಲ ಎಂದು ಬಾಯಲ್ಲಿ ಹೇಳಿದರೂ ಅಲ್ಲೆಲ್ಲೋ ನಮ್ಮೊಳಗೆ ಅದು ಅಡಗೇ ಇದೆ. ಎಂತೆಂತಹ ಮೇಧಾವಿಗಳನ್ನೂ, ಖ್ಯಾತ ವ್ಯಕ್ತಿಗಳ ಜೀವನವನ್ನೂ ಹತ್ತಿರದಿಂದ ನೋಡಿದಾಗಲೂ ನನಗೆ ಇದರ ಎಳೆಯೊಂದು ಗೋಚರಿಸದೇ ಇರುವುದಿಲ್ಲ. ಅಧ್ಯಯನ ಮತ್ತು ಅನುಭವ ಇದನ್ನು ಕಡಿಮೆಗೊಳಿಸಬಹುದಾದರೂ ಬುಡಸಮೇತ ಕಿತ್ತೆಸೆಯಲಾರದು. […]

ಈ ಕ್ಷಣದ ಸುದ್ದಿ

ಬೆಟ್ಕುಳಿ ರಾಜು ನಾಯ್ಕರಿಗೆ ಒಲಿದು ಬಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ…

ʼಶಕ್ತಿಶಾಲಿಗಳಿಗಾಗಿ, ಶ್ರದ್ಧಾವಂತರಾಗಿ ಆಗ ಎಲ್ಲವು ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ…ʼ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದವರು ಕುಮಟಾ ತಾಲೂಕಿನ ಮಿರ್ಜಾನ ಪ್ರೌಢಶಾಲೆಯ ಶಿಕ್ಷಕ ರಾಜು ರಾಮನಾಯ್ಕರು. ಮೂಲತ: ಬೆಟ್ಕುಳಿಯವರಾದ ಇವರ ತಂದೆ […]

ಈ ಕ್ಷಣದ ಸುದ್ದಿ

ಭಾಸ್ಕರ ನಾಯ್ಕರ ಮುಡಿಗೆ ರಾಜ್ಯ ಉತ್ತಮ ಶಿಕ್ಷಕ ಪುರಸ್ಕಾರದ ಗರಿ

ವಿದ್ಯೆಯೊಂದಿಗೆ, ವಿನಯ ಸಂಪತ್ತಿನೊಂದಿಗೆ, ಸಜ್ಜನರ ಸಹವಾಸ ದೊಂದಿಗೆ, ಸದಾ ಕ್ರಿಯಾಶೀಲತೆಯೊಂದಿಗೆ ವೃತ್ತಿಯ ಘನತೆ, ಗೌರವ ಹೆಚ್ಚಿಸಿದವರು ಯಲ್ಲಾಪುರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ ನಾಯ್ಕರು. ಈ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಮೂಲತಃ ಕುಮಟಾ ತಾಲೂಕಿನ ಅಘನಾಶಿನಿ ಕೋಟಿಮನೆ ಕುಟುಂಬದಲ್ಲಿ ತಂದೆ ಗಣಪತಿ ನಾಯ್ಕ, ತಾಯಿ […]

ಒಡನಾಡಿ ವಿಶೇಷ

ದಾಂಡೇಲಿಯ ಮಂಗಳಮುಖಿಗೀಗ ಮಂಗಳೂರಲ್ಲಿ “ಟ್ರಾನ್ಸ್‌ ಕ್ವೀನ್‌” ಸೌಂದರ್ಯ ಕಿರೀಟ

ಪ್ರತಿಭೆ ಯಾರ ಸ್ವತ್ತಲ್ಲ. ಸಮಾಜದಲ್ಲಿ ನಿರ್ಲಕ್ಷಕ್ಕೆ, ನಿಕೃಷ್ಠಕ್ಕೆ ಒಳಗಾದವರೂ ಕೂಡಾ ಅಚಲವಾದ ಗುರಿಯಿಟ್ಟುಕೊಂಡರೆ ಸಾಧನೆಯ ಮೆಟ್ಟಿಲೇರಿ ಮತ್ತದೇ ಸಮಾಜದೆದುರು ತಮ್ಮ ಗೆಲುವಿನ ನಗೆ ಬೀರಲು ಸಾದ್ಯವಿದೆ. ಹಾಗೆ ಮಾಡಿ ತೋರಿಸಿದವರೂ ಹಲವರಿದ್ದಾರೆ. ಅಂತಹವರ ಸಾಲಿನಲ್ಲಿ ದಾಂಡೇಲಿಯ ಕೋಗಿಲಬನದ ಮಂಗಳಮುಖಿ ಸಂಜನಾ ಚಲವಾದಿ ಒಬ್ಬರಾಗುತ್ತಾರೆ. ಮಂಗಳಮುಖಿಯರು ಎಂದರೆ ಜನ ತಮ್ಮವರು […]

ದಾಂಡೇಲಿ

ದಾಂಡೇಲಿಯಲ್ಲಿ ಆತಂಕದ ಶನಿವಾರ…. ದಾಖಲೆಯ ಪಾಸಿಟಿವ್ ಪ್ರಕರಣ…???

ದಾಂಡೇಲಿಯಲ್ಲಿ ಶನಿವಾರ 22 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದಂತಾಗಿದೆ. ಶನಿವಾರದ ವರದಿಯಂತೆ ದಾಂಡೇಲಿಯ ಸರಕಾರಿ ಆಸ್ಪತ್ರೆಯ ಕೆಲ ಸಿಬ್ಬಂದಿಗಳಿಗೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ. ಜೊತೆಗೆ ವೆಸ್ಟಕೋಸ್ಟ ಪೇಪರ್ ಮಿಲ್ ನೊಳಗಿನ ಕೆಲ ಕಾರ್ಮಿಕರಲ್ಲಿಯೂ […]

ಪರಿ‍ಚಯ

ಪತಂಜಲಿಗೆ ಬಂದಿದೆ ಕೊರೊನಾ ‘ಯೋಗ’

ಹಿಂದೆಲ್ಲಾ ಪತಂಜಲಿ ಔಷಧಿಗಳೆಂದರೆ ಅಷ್ಟಕಷ್ಟೇ ಆಗಿತ್ತು. ಅದನ್ನು ಬಳಸುವವರು ಸೀಮಿತವಾಗಿದ್ದರು. ಕೆಲವರು ಪತಂಜಲಿ ಎಂದರೆ ಮೂಗು ಮುರಿಯುತ್ತಿದ್ದರು. ಒಂದು ನಗರದಲ್ಲಿ ಒಂದೋ ಎರಡೋ ಪತಂಜಲಿ ಮಳಿಗೆಗಳಿದ್ದರೂ ವ್ಯಾಪಾರ ಅಷ್ಟಕಷ್ಟೆ ಆಗಿತ್ತು. ಆದರೆ ಈಗ ಹಾಗಿಲ್ಲ. ಕೊರೊನಾ ಕಾರಣಕ್ಕೆ ಜನ ಅದ್ಯಾಕೋ ಪತಂಜಲಿ ಹಾಗೂ ಮನೆ ಔಷಧಿಯತ್ತ ಹೆಚ್ಚಿನ ಆಸಕ್ತಿ […]

ಒಡನಾಡಿ ವಿಶೇಷ

ಪೇಪರ್ ಹುಡುಗನ ಸೈಕಲ್ ಮೇಲಿನ ಸ್ಪೀಕರ್ ಮೋಹ

ಒಬೊಬ್ಬರಲ್ಲಿ ಒಂದೊಂದು ರೀತಿಯ ಹವ್ಯಾಸ. ಬಗೆ ಬಗೆಯ ಆಸಕ್ತಿ. ಅದರಲ್ಲಿಯೇ ಅವರು ಸುಖ ಕಾಣುತ್ತಾರೆ. ಈತನನ್ನು ನೋಡಿ. ಈತ ನಿತ್ಯ ಮನೆ ಮನೆಗೆ ಪೇಪರ್ ಹಾಕುವ ಹುಡುಗ. ಹೆಸರು ಆಶಿಶ್ ಅಜಿತ್ ಬಸಲಿಂಗೋಳ. ದಾಂಡೇಲಿಯ ಗಾಂಧೀನಗರದ ನಿವಾಸಿ. ಓದಿನಲ್ಲೇನೂ ಹಿಂದೆ ಇಲ್ಲ. ಸದ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. […]

ಪರಿ‍ಚಯ

ಲೆಪ್ಟಿನೆಂಟ್ ಕರ್ನಲ್ ಹುದ್ದೆಗೆ ಆಯ್ಕೆಯಾದ ಪ್ರಕಾಶ ಶಿಡ್ಲಾಣಿಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸನ್ಮಾನ

ದಾಂಡೇಲಿ: ಲೆಪ್ಟಿನಂಟ್ ಕರ್ನಲ್ ಹುದ್ದೆಗೆ ಆಯ್ಕೆಯಾಗಿರುವ ದಾಂಡೇಲಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹಳಿಯಾಳ ತಾಲೂಕಿನ ಹಂದಲಿ ಗ್ರಾಮದ ಪ್ರಕಾಶ ಮಾರುತಿ ಶಿಡ್ಲಾಣಿ ಇವರನ್ನು ಗ್ರಾಮೀಣ ಠಾಣೆಯಲ್ಲಿ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಸನ್ಮಾನಿಸಿ ಗೌರವಿಸಿದರು. ಇವರೊಂದಿಗೆ ಇಂಡಿಯನ್ ಆರ್ಮಿಗೆ ಆಯ್ಕೆಯಾಗಿರುವ ಹಂದಲಿ ಗ್ರಾಮದ ಮತ್ತೊಬ್ಬ ಯುವಕ ಮಾರುತಿ […]

ಒಡನಾಡಿ ವಿಶೇಷ

ನಾನಾ ಔಷಧಿ ನೀಡುವ ನಾಟಿ ವೈದ್ಯಇಸ್ಮಾಯಿಲ್ ಶೇಖ್‌ ಅಲಿಯಾಸ್‌ ಬಾಬಾ…

 ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರದರೂ ಸಹ  ಕೆಲ ಪಾರಂಪರಿಕ ಸಂಗತಿಗಳು ಈಗಲೂ ಜೀವಂತಿಕೆಯನ್ನಿಟ್ಟುಕೊಂಡಿವೆ ಅವುಗಳಲ್ಲಿ ನಾಟಿ ವೈದ್ಯ ಕ್ಷೇತ್ರವೂ ಒಂದು.  ಇಂದು ಬಹಳಷ್ಟು ಜನ ಈ ನಾಟಿ ವೈದ್ಯರ ಔಷಧಿಯನ್ನೆ  ನೆಚ್ಚಿಕೊಂಡವರಿದ್ದಾರೆ, ಬಳಸಿ ಗುಣಮುಖರಾದವರೂ ಇದ್ದಾರೆ. ಹೀಗೆ ನಾಟಿ ಔಷಧಿ ನೀಡುವವರಲ್ಲಿ ಬಹಳಷ್ಟು ಹೆಸರು ಪಡೆದವರುಲ್ಲೊಬ್ಬರೆಂದರೆ ದಾಂಡೇಲಿಯ ವನಶ್ರೀ […]

ಉತ್ತರ ಕನ್ನಡ

ಆದರ್ಶ ಶಿಕ್ಷಕ ಹೊಳೆಗದ್ದೆಯ ಎಂ .ಎಸ್.ನಾಯ್ಕ

” ಮೊದಲು ಆಳಾಗುವುದನ್ನು ಕಲಿಯಿರಿ.ಆಗ ನಾಯಕನ ಅಹೃತೆ ನಿಮಗೆ ಬರುತ್ತದೆ. ಒಂದುಸಾಮಾನ್ಯ ಕೆಲಸನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ” ಎಂಬ ಸ್ವಾಮಿವಿವೇಕಾನಂದರವರ ಮಾತನ್ನು ತಮ್ಮ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಅಚ್ಚುಕಟ್ಟುತನದಿಂದ ಕೆಲಸ ನಿರ್ವಹಿಸಿ ಆದರ್ಶ ಶಿಕ್ಷಕರಾಗಿ ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಹೊಳೆಗದ್ದೆಯ ಶ್ರೀ ಎಂ.ಎಸ್.ನಾಯ್ಕರವರು. […]