ದಾಂಡೇಲಿ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ ಪ್ರಣವ ಪ್ರವೀಣ್ ನಾಯ್ಕ್ ಇವರನ್ನು ನಾಮಧಾರಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಂಘದಿಂದ ಸತ್ಕರಿಸಿದರು.
ಸಮಾಜದ ಅಧ್ಯಕ್ಷರಾದ ಆರ್.ಎಸ್.ನಾಯ್ಕ ವಿದ್ಯಾರ್ಥಿಗೆ ಶುಭಕೋರಿ ಸಮಾಜದ ಕೀರ್ತಿ ಇನ್ನೂ ಎತ್ತರಕ್ಕೆ ಬೆಳೆಸುವಂತೆ ಹಾರೈಸಿದರು. ಸೀತಾರಾಮ ನಾಯ್ಕ, ಶ್ರೀಕಾಂತ್ ನಾಯ್ಕ , ಮಾರುತಿ ನಾಯ್ಕ ಹಾಗೂ ಪಾಲಕರಾದ ಪ್ರವೀಣ್ ನಾಯ್ಕ, ನಂದಿನಿ ನಾಯ್ಕ ಉಪಸ್ಥಿತರಿದ್ದರು.
Be the first to comment