ಈ ಕ್ಷಣದ ಸುದ್ದಿ

ಜಿಲ್ಲೆಯಲ್ಲಿ ಕೊರೊನಾ ಸಮುದಾಯದೊಳಗೆ ಹರಡಿಲ್ಲ: ಅನಗತ್ಯ ಪ್ರಚಾರ ಒಪ್ಪುವುದಿಲ್ಲ- ಡಿ.ಸಿ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಿಜ. ಈ ಸಂಖ್ಯೆಗಳ ಆಧಾರದಲ್ಲಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೊನಾ ಈಗಾಗಲೇ ಸಮುದಾಯದೊಳಗೆ ಹರಡಿದೆ ಎಂದು ಹೇಳುವುದನ್ನು ಹಾಗೂ ಅದಕ್ಕೆ ಸಂಬಂಧಿಸಿ ಆಗುವ ಅನಗತ್ಯ ಪ್ರಚಾರಗಳನ್ನು ಒಪ್ಪುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು. ದಾಂಡೇಲಿ ನಗರಸಭೆಯಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಅಧಿಕಾರಿಗಳ ಸಭೆ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ವಾಲೆಂಟರಿ ಲಾಕ್ ಡೌನ್ : ಪೌರಾಯುಕ್ತರ ಪ್ರಕಟಣೆಯಲ್ಲೇನಿದೆ ನೋಡಿ…!

ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ನಗರಸಭಾ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮನವಿಯಂತೆ ವಾಲೆಂಟರಿ ಲಾಕ್ ಡೌನ್ ಮಾಡಲು ನಿರ್ದರಿಸಲಾಗಿದ್ದು, ಅದಕ್ಕೆ ಸಂಬಂದಿಸಿ ನಗರ ಸಭೆ ಪೌರಾಯುಕ್ತರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ…. ಅದರಲ್ಲೇನಿದೆ ನೋಡಿ… ಲಾಕ್ ಡೌನ್ ಸಂದರ್ಭದಲ್ಲಿ ಏನೇನು ಸಿಗುತ್ತೆ… ? ಏನೇನು ಸಿಗೋದಿಲ್ಲ…? […]

ಈ ಕ್ಷಣದ ಸುದ್ದಿ

ಶುಕ್ರವಾರ ದಾಂಡೇಲಿಯಲ್ಲಿ ಎಷ್ಟು ಪಾಸಿಟಿವ್‌ ಪ್ರಕರಣ ಗೊತ್ತಾ…?

ಕಳೆದ ಕೆಲದಿನಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಲಿದ್ದ ಕೊರೊನಾ ಸೋಂಕಿತರ ಸಂಖ್ಯೆಯಿಂದ ಆತಂಕಗೊಂಡಿದ್ದ ದಾಂಡೇಲಿಗರು ಶುಕ್ರವಾರ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶುಕ್ರವಾರ ಬಂದ ಕೊರರೊನಾ ಹೆಲ್ತ್‌ ಬುಲೆಟಿನ್‌ ವರದಿಯಲ್ಲಿ ನಗರದ ಟೌನ್‌ಶಿಪ್‌ನ 46 ವರ್ಷದ ಪುರಷನೋರ್ವನಲ್ಲಿ ಮಾತ್ರ ಕೊರೊನಾ ಪಾಸಿಟಿವ್‌ ದೃಢವಾಗಿದೆ.‌ ಉಳಿದಂತೆ ಸೋಂಕಿಗೊಳಗಾಗಿ ಗುಣಮುಖನಾಗಿ ಮನೆ ಸೇರಿರುವ ನ್ಯಾಯವಾದಿಯ […]

ಈ ಕ್ಷಣದ ಸುದ್ದಿ

ಶನಿವಾರದಿಂದ ದಾಂಡೇಲಿಯಲ್ಲಿ ಅರ್ಧದಿನ ಲಾಕ್‍ಡೌನ್: ಮುಂಜಾನೆ 8ರಿಂದ ಮದ್ಯಾಹ್ನ 3ರವರೆಗೆ ಮಾತ್ರ ಓಪನ್

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಕಾರಣದಿಂದಾಗಿ ದಾಂಡೇಲಿಯಲ್ಲಿ ಶನಿವಾರದಿಂದ ಮದ್ಯಾಹ್ನ 3 ಗಂಟೆಯ ನಂತರ ಕಟ್ಟುನಿಟ್ಟಿನ ಲಾಕ್‌ ಡೌನ್‌ ಆಗಲಿದೆ. ದಾಂಡೇಲಿಯಲ್ಲಿ ಶುಕ್ರವಾರ ಎಂಟು ಕೊರೊನಾ ಪೊಸಿಟಿವ್ ಪ್ರಕರಣಗಳು ದೃಢವಾಗಿವೆ. ಇಲ್ಲಿಯವರೆಗೆ ಒಟ್ಟೂ 27 ಪ್ರಕರಣಗಳಾದಂತಾಗಿದೆ. ಜನ ಆತಂಕಕ್ಕೊಳಗಾಗುತ್ತಿದ್ದಾರೆ. ಇದರಿಂದ ನಗರದ ಜನರು ಹಾಗೂ ವ್ಯಾಪಾರಸ್ಥರೇ ಸ್ವಯಂ […]

ಈ ಕ್ಷಣದ ಸುದ್ದಿ

ದಾಂಡೇಲಿಗರನ್ನು ಭಯಬೀಳಿಸಲಿದೆ ಇಂದಿನ ಹೆಲ್ತ್ ಬುಲೆಟಿನ್!!

ಇಂದಿನ ಹೆಲ್ತ ಬುಲೆಟಿನ್ ದಾಂಡೇಲಿಗರನ್ನು ಭಯಬೀಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಕ್ರವಾರದಂದು ದಾಂಡೇಲಿಯಲ್ಲಿ ಈವರೆಗೆ ಬಂದಿದ್ದ ದಿನದ ವರದಿಗಳಿಗಿಂತ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾಗುವ ಮಾಹಿತಿಯಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ದಾಂಡೇಲಿಯೊಂದರಕ್ಹೆಲೇ ಚ್ಚುಕಮ್ಮಿ 8 ಪಾಸಿಟಿವ್ ಪ್ರಕರಣ ಎಂಬ ಮಾಹಿತಿಯಿದೆ.

ಈ ಕ್ಷಣದ ಸುದ್ದಿ

ದಾಂಡೇಲಿ-ಹಳಿಯಾಳದಲ್ಲಿ ತಲಾ ನಾಲ್ಕು ಕೊರೊನಾ ಪಾಸಿಟಿವ್… ನಾಲ್ಕು ವರ್ಷದ ಮಗುವಿಗೂ ಸೋಂಕು…

ದಾಂಡೇಲಿ: ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಂಗಳವಾರ ದಾಂಡೇಲಿ- ಹಳಿಯಾಳದಲ್ಲಿ ತಲಾ ನಾಲ್ಕು ಸೊಂಕಿತರು ಸೇರಿದಂತೆ ಒಟ್ಟು ಎಂಟು ಪಾಸಿಟಿವ್ ಪ್ರಕರಣಗಳು ದ್ರಢಪಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ. ದಾಂಡೇಲಿಯ ನಾಲ್ಕು ವರ್ಷದ ಮಗುವಿಗೂ ಸೋಂಕು ದ್ರಢವಾಗಿರುವುದು ಆತಂಕದ ಬೆಳವಣಿಗೆಯಾಗಿದೆ. ದಾಂಡೇಲಿಯ ಥರ್ಡ ನಂಬರನ ಗೇಟ್ ಬಳಿಯ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್…

ದಾಂಡೇಲಿ: ಮುಂಬೈನಿಂದ ರಿಟರ್ನ ಆಗಿದ್ದ ದಾಂಡೇಲಿಯ ಪಟೇಲ ನಗರದ ವ್ಯಕ್ತಿಯೋರ್ವನಿಗೆ ರವಿವಾರ ಕೊರನಾ ಸೋಂಕು ದೃಢ ಪಟ್ಠಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮುಂಬೈನಿಂದ ಮರಳಿ ನಿಗದಿತ ಸಮಯದವರೆಗೆ ಹಾಸ್ಟೆಲ್ ಕ್ವಾರೆಂಟೈನ್ ನಲ್ಲಿದ್ದು ನಂತರ ಹೋಮ್ ಕ್ವಾರೆಂಟೈನ್ ನಲ್ಲಿದ್ದರು. ನಂತರ ಹೋಮ್ ಕ್ವಾರೆಂಟೈನ್ ನಲ್ಲಿದ್ದರು. ರವಿವಾರ ಇವರ ಗಂಟಲು […]

ಈ ಕ್ಷಣದ ಸುದ್ದಿ

ರಾಜ್ಯದಲ್ಲಿ 11000ಕ್ಕೇರಿದ ಕೊರೊನಾ ಸೋಂಕಿತರು… ಶುಕ್ರವಾರ 10 ಬಲಿ…, 450 ಜನರಿಗೆ ಪಾಸಿಟಿವ್…

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ 11000ಕ್ಕೇರಿದ್ದು, ಶುಕ್ರವಾರ 10 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆಯಾದಂತಾಗಿದೆ. ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಆರು ಸೋಂಕಿತರಲ್ಲಿ ಐವರು ಗುಣಮುಖ

ದಾಂಡೇಲಿಯಲ್ಲಿ ಇಲ್ಲಿಯವರೆಗೆ ಆರು ಜನರಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಐವರೂ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ. ಬುಧವಾರ ರಾತ್ರಿ. ದೆಹಲಿಯಿಂದ ಊರಿಗೆ ಆಗಮಿಸಿದ ಹಳೆದಾಂಡೇಲಿಯ 50 ವರ್ಷದ ಸಿ.ಆರ್.ಪಿ.ಎಪ್. (ಕೇಂದ್ರ ಶಶಸ್ತ್ರ ಮೀಸಲು ಪೊಲೀಸ್‌ ಪಡೆ) ಯೋಧನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಆತನನ್ನು […]

ಈ ಕ್ಷಣದ ಸುದ್ದಿ

ಸ್ನೇಹಿತರ ಜಗಳ: ಸಾವಿನಲ್ಲಿ ಅಂತ್ಯ : ಕೊಲೆ ಪ್ರಕರಣ ದಾಖಲು – ಈರ್ವರ ಬಂಧನ

ದಾಂಡೇಲಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೀರ್ವರ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು ಎಂಟು ದಿನಗಳ ನಂತರ ಇದೀಗ ಕೊಲೆ ಪ್ರಕರಣ ದಾಖಾಗಿ, ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ನಗರದ ಟೌನ್‍ಶಿಪ್‍ನ ದಯಾನಂದ ಒಂಟೆ (27) ಎಂಬಾತನೇ ಹೊಡೆದಾಟದಲ್ಲಿ ಗಾಯಗೊಂಡು ಸಾವ್ನಪ್ಪಿದ (ಕೊಲೆಯಾದ) ವ್ಯಕ್ತಿಯಾಗಿದ್ದಾನೆ. ಪಟೇಲನಗರದ ಶೌಕತ್ ಅಲಿ ಸತ್ತಾರಸಾಬ ಜಮಾದಾರ (25) ಹಾಗೂ […]