ಈ ಕ್ಷಣದ ಸುದ್ದಿ

ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಅಧಿಕಾರಿಗಳಿಗೆ ತರಬೇತಿ ನೀಡಿದ ಅಪರ ಜಿಲ್ಲಾಧಿಕಾರಿ

ದಾಂಡೇಲಿ: ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಹಳಿಯಾಳ, ದಾಂಡೇಲಿ, ಜೋಯಿಡಾದ ಎಲ್ಲ ಗ್ರಾಮ ಪಂಚಾಯತಗಳ ಚುನಾವಣಾಧಿಕಾರಿಗಳಿಗೆ ಹಾಗೂ ಸಹಯಕ ಚುನಾವಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರು ದಾಂಡೇಲಿ ನಗರಸಭೆ ಸಭಾಭವನದಲ್ಲಿ ಸಭೆ ನಡೆಸಿ ತರಬೇತಿ ನೀಡಿದರು. ಗ್ರಾಮ ಪಂಚಾಯತಗಳ ಚುನಾವಣೆಯಲ್ಲಿ ನಿರ್ವಹಿಸಬೇಕಾದ ಕಾರ್ಯಗಳು ಹಾಗೂ ಪಾಲಿಸಬೇಕಾದ ಚುನಾವಣಾ ಆಯೋಗದ ನಿಯಮಗಳ […]

ಈ ಕ್ಷಣದ ಸುದ್ದಿ

ಭಾ.ಜ.ಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುನೀಲ ಹೆಗಡೆ

ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ನೇಮಕ ಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಿಂದ ಇಬ್ಬರನ್ನು ರಾಜ್ಯ ಕಾರ್ಯಕಾರಿ ಸಮಿತಿಗೆ ನೇಮಕ ಗೊಂಡಿದ್ದು ಭಾ.ಜ.ಪ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಮತ್ತೋರ್ವರಾಗಿದ್ದಾರೆ. ಸುನೀಲ ಹೆಗಡೆಯವರ ನೇಮಕಕ್ಕೆ ಹಳಿಯಾಳ-ದಾಂಡೇಲಿ-ಜೊಯಿಡಾದ […]

ಈ ಕ್ಷಣದ ಸುದ್ದಿ

ಗಾಂವಠಾಣಾ – ಮೌಳಂಗಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ದಾಂಡೇಲಿ: ಹದಗೆಟ್ಟ ಅಂಬೇವಾಡಿ-ಮಾವಳಂಗಿ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಭಟನೆ ನಡೆಸಿದರು. ಇದು ದಾಂಡೇಲಿಗೆ ಹತ್ತಿರದ ಮಾವಳಂಗಿ ಇಕೋ ಪಾರ್ಕ ಸಂಪರ್ಕಿಸುವ ರÀಸ್ತೆಯಾಗಿದ್ದು, ಇಲ್ಲಿ ಪ್ರವಾಸಿಗರ ಸಂಚಾರ ನಿತ್ಯ ಹೆಚ್ಚಿರುತ್ತದೆ. ಜೊತೆಗೆ ಅಂಬೇವಾಡಿ, ಗಾಂವಠಾಣ, ನವಗ್ರಾಮವ, ಮಾವಳಂಗಿಗೆ ಹೋಗಿ ಬರುವ ಪ್ರಮುಖ ರಸ್ತೆ […]

ಈ ಕ್ಷಣದ ಸುದ್ದಿ

ಪದೋನ್ನತ್ತಿಗೊಂಡ ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿ

ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿಯವರುರಾಣೆಬೆನ್ನೂರಿನ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭುಸ್ವಾಧೀನಾಧಿಕಾರಿಗಳಾಗಿ ಪದೋನ್ನತ್ತಿಗೊಂಡಿದ್ದಾರೆ. ಸುಮಾರು ಆರು ವರ್ಷಗಳಿಂದ ಅವಿಭಜಿತ ಹಳಿಯಾಳ ತಾಲೂಕಾ ತಹಶೀಲ್ದಾರರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾಧರ ಗುಳಗುಳಿಯವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ಜನಪ್ರೀತಿ ಗಳಿಸಿದ್ದರು. ತಮ್ಮ ಕೆಲಸಗಳ ಮೂಲಕವೇ ತಾಲೂಕಿನ ಜನಮೆಚ್ಚುಗೆಯ ಅಧಿಕಾರಿಗಳೆನಿಸಿಕೊಂಡಿದ್ದರು. ಕೆಲ ಕಾಲ […]

ಈ ಕ್ಷಣದ ಸುದ್ದಿ

ದಾಂಡೇಲಿಯ DYSP ಯಾಗಿ ಪ್ರಶಾಂತ ಸಿದ್ದನಗೌಡರ್…

ದಾಂಡೇಲಿ ಪೊಲೀಸ್ ಉಪ ವಿಭಾಗದ ಅರಕ್ಷಕ ಉಪ ಅಧೀಕ್ಷಕರಾಗಿ (DYSP) ಪ್ರಶಾಂತ ಸಿದ್ದನಗೌಡರ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಗುಪ್ತ ವಾರ್ತೆಯಲ್ಲಿ ಡಿ.ಎಸ್.ಪಿ. ಯಾಗಿದ್ದ ಸಿದ್ದನಗೌಡರವರು ದಾಂಡೇಲಿಯ ಡಿ.ವೈ.ಎಸ್.ಪಿ. ಯಾಗಿ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಆರಕ್ಷಕ ಮಹಾ ನಿರ್ದೇಶಕರು ಬುಧವಾರ ಈ ಆದೇಶ ಹೊರಡಿಸಿದ್ದಾರೆ. ಹಿಂದೆ ಇವರು ಜೋಯಿಡಾ’ ಹಳಿಯಾಳ, ದಾಂಡೇಲಿಯಲ್ಲಿ CPI […]

ಈ ಕ್ಷಣದ ಸುದ್ದಿ

ಬುಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ ಇನ್ನಿಲ್ಲ

ಹಳಿಯಾಳ ತಾಲೂಕಿನ ಹಿರಿಯ ಹಾಗೂ ಬಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ (79) ರವಿವಾರ ಮುಂಜಾನೆ ಕೊನೆಯುಸಿರೆಳೆದರು.ಸುಮಾರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕನ್ನಡ, ಇಂಗ್ಲೀಷ, ಮರಾಟಿ ಪತ್ರಿಕೆಗಳಿಗೆ ಸುದ್ದಿ ನೀಡುತ್ತಿದ್ದರು. ಮರಾಠಿ ಯಲ್ಲಿ ಅಕ್ಷರಾಭ್ಯಾಸ ಮಾಡಿದ್ದರಾದರೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.ತಾಲೂಕಿನ ರಾಜಕೀಯ, […]

ಈ ಕ್ಷಣದ ಸುದ್ದಿ

ಸರ್ವೀಸಿಂಗ್ ಸೆಂಟರ್‌ನಲ್ಲಿ ಕೂಲಿಯಾಗಿದ್ದ ಬಾಲಕ ಈಗ ನಗರಸಭೆಯ ಉಪಾಧ್ಯಕ್ಷ

ದಾಂಡೇಲಿ ನಗರಸಭೆಯ ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಎಂಬ ಕ್ರಿಯಾಶೀಲ ಯುವಕ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವೂ ಸೇರಿದಂತೆ ದಾಂಡೇಲಿಯ ಜನತೆ ಇವರ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಂಡಿದೆ. ಅತ್ಯಂತ ಬಡತನದಿಂದ ಬಂದಿರುವ ಸಂಜಯ ನಂದ್ಯಾಳಕರ ಚಿಕ್ಕಂದಿನಿAದಲೇ ಮಹತ್ವಾಕಾಂಕ್ಷೆಯ ಕನಸು ಕಂಡವರು. ತಂದೆ ಕೂಲಿ ಕೆಲಸ ಮಾಡಿ ಸಂಸಾರದ ಹೊಣೆ ನಿರ್ವಹಿಸುತ್ತಿರುವಾಗಲೇ ಸಂಜಯ […]

ಈ ಕ್ಷಣದ ಸುದ್ದಿ

ದಾಂಡೇಲಿ ನಗರಸಭಾ ಅಧ್ಯಕ್ಷರಾಗಿ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ

ದಾಂಡೇಲಿ: ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಬಹುಮತದಿಂದ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ. ನಗರಸಭೆ ಸಭಾಭವನದಲ್ಲಿ ರವಿವಾರ ಸಂಜೆ 5 ಗಂಟೆಯಿಂದ 8.30 ರವರೆಗೂ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಮ್. ರವರ ನೇತೃತ್ವದಲ್ಲಿ […]

ಈ ಕ್ಷಣದ ಸುದ್ದಿ

ಶೃದ್ಧಾ-ಭಕ್ತಿಯೊಂದಿಗೆ ಸರಳವಾಗಿ ನಡೆದ ಸತ್ಪುರುಷ ದಾಂಡೇಲಪ್ಪಾ ಜಾತ್ರೆ

ದಾಂಡೇಲಿ: ಪ್ರತಿ ವರ್ಷವೂ ವಿಜಯದಶಮಿಯಂದು ವಿಜ್ರಂಬಣೆಯಿಂದ ನಡೆಯಲ್ಪಡುತ್ತಿದ್ದ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲೊಂದಾದ ದಾಂಡೇಲಿಯ ಜನರ ಆರಾಧ್ಯ ದೈವ “ಸತ್ಪುರುಷ ದಾಂಡೇಲಪ್ಪಾ ಜಾತ್ರೆ” ಈ ವರ್ಷ ಕೊರೊನಾ ಕಾರಣಕ್ಕೆ ಶೃದ್ಧಾ-ಭಕ್ತಿಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು. ರವಿವಾರ ನಸುಕಿನ ಜಾವ ದಾಂಡೇಲಪ್ಪನ ಪಾದುಕಾ ಪಲ್ಲಕ್ಕಿಯು ಪಾದುಕಾ ಸ್ಥಾನ ಮಿರಾಶಿಗಲ್ಲಿಯಿಂದ ಕೆರವಾಡಾ […]

ಈ ಕ್ಷಣದ ಸುದ್ದಿ

ದಾಂಡಿಯಾವೂ ಇಲ್ಲ: ದಾಂಡೇಲಪ್ಪ ಜಾತ್ರೆಯೂ ಇಲ್ಲ: ರಾಮಲೀಲಾ, ರಸಮಂಜರಿಯೂ ನಡೆಯುವುದಿಲ್ಲ..!

ದಾಂಡೇಲಿ: ಮಹಾಮಾರಿ ಕೊರೊನಾದ ಕರಿನೆರಳು ದಾಂಡೇಲಿ ದಸರಾದ ಮೇಲೂ ಬಿದ್ದಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ದಸರಾದ ಸಡಗರವಾಗಿದ್ದ ದಾಂಡಿಯಾ( ಕೋಲಾಟ) ಹಾಗೂ ಇಲ್ಲಿಯ ಗ್ರಾಮದೇವರೇ ಆಗಿರುವ ಸತ್ಪುರುಷ ದಾಂಡೇಲಪ್ಪ ಜಾತ್ರೆ ನಡೆಯುವುದು ಬಹುತೇಕ ಅನಿಶ್ಚಿತವಾಗಿದೆ. ಪ್ರತೀ ವಿಜಯದಶಮಿಯಂದು ದಾಂಡೇಲಿಯಲ್ಲಿ ದಾಂಡೇಲಪ್ಪ ಜಾತ್ರೆಯನ್ನು ಅತೀ ವಿಜ್ರಂಬಣೆಯಿಂದ ಆಚರಿಸುತ್ತ ಬಂದಿರುವುದು […]