ಈ ಕ್ಷಣದ ಸುದ್ದಿ

ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಗದ ಕಂಪನಿಯಿಂದ 5 ಲಕ್ಷ ರು.ಗಳ ರಕ್ತ ತಪಾಸಣಾ ಯಂತ್ರ

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಾಲೂಕಿನ ಗಾಂಧಿನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ವೆಚ್ಚದ ರಕ್ತ ತಪಾಸಣಾ ಯಂತ್ರ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ. ದಾಂಡೇಲಿ ನಗರದ ಕೊಳಚೆ ಪ್ರದೇಶವೆಂದೆ ಕರೆಯಲ್ಪಡುವ ಗಾಂಧಿನಗರದಲ್ಲಿ ಹಲವಾರು […]

ಒಡನಾಡಿ ವಿಶೇಷ

ಗ್ರಾಮ ಪಂಚಾಯತ ಅಭಿವೃದ್ಧಿಯ ಕನಸುಗಾರ ಉದಯ ಬಾಂದೇಕರ

ಮನಸ್ಸು ಎಲ್ಲದಕ್ಕೂ ಮೂಲ. ಮನಸ್ಸು ಎಂದರೆ ಸಂಕಲ್ಪದ ಶಕ್ತಿ. ಒಂದು ಕೆಲಸವನ್ನು ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮನಸ್ಸಿಗಿದೆ.ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂಥ ಮನಸ್ಸಿನ ಹಾದಿಯಲ್ಲಿ ನಡೆದು ಜಿಲ್ಲೆಯ ಗ್ರಾಮ ಪಂಚಾಯಿತಿಗೆ ಮಾದರಿಯಾಗಿ “ಪಿಡಿಒ ಆಫ್ ದಿ ಮಂತ್”ಪ್ರಶಸ್ತಿಗೆ ಪುರಸ್ಕೃತರಾದವರು ಹೆರಂಗಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಈಶ್ವರ […]

ಉತ್ತರ ಕನ್ನಡ

ಸಾರ್ಥಕ ಬದುಕಿನ ಸರದಾರ : ಬೆಳ್ಕೆಯ ದೇವಿದಾಸ ಮೊಗೇರ

“ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜೀತವ“ ಪ್ರಿಯವಾದ ಮಾತು ಎಲ್ಲರನ್ನು ಸಂತೋಷಪಡಿಸುತ್ತದೆ. ಮಾತು ಪ್ರಿಯವಾಗಿದ್ದರಷ್ಟೇ ಸಾಲದು; ಅದು ಹಿತವಾಗಿರಬೇಕು. ಕೇಳುವುದಕ್ಕೆ ಆಕರ್ಷಕವೂ ಆಗಿರಬೇಕು. ಕೇಳಿದ ನಂತರ ಚಿಂತನೆಗೆ ಹಚ್ಚುವಂತಿರಬೇಕು. ನಾಲ್ಕು ಕಾಲ ನೆನಪಿಸುವಂತಿರಬೇಕು. ಹೀಗಾಗಬೇಕಿದ್ದರೆ ಮಾತನ್ನು ಕಲೆಯಾಗಿಸುವ ಕೌಶಲ್ಯ ಬೇಕು. ಇಂತಹ ಕೌಶಲ್ಯ ಮಾತಿನ ಮೂಲಕ ಶಿಕ್ಷಕರಲ್ಲಿ […]

ಒಡನಾಡಿ ವಿಶೇಷ

ಕಿಲುಬಿಲ್ಲದ ಶಿಕ್ಷಕ ಸ್ನೇಹಿ- ಹೊಳೆಗದ್ದೆಯ ದಯಾನಂದ ದೇಶಭಂಡಾರಿ

‘ಎಷ್ಟು ಹಣತೆಗಳಿಂದ ಕತ್ತಲೆ ಕರಗುವುದುಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದುಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದುಒಂದು ಕವಿತೆಗೆ ಕೂಡ ಮನ ಕರಗುವುದು…’ ಕಣವಿಯವರ ಈ ಕವನದ ಸಾಲಿನ ತಾತ್ಪರ್ಯ ಇಷ್ಟೇ!, ಮನೆ ಬೆಳಗಲು ಒಂದು ಹಣತೆಯಾದರೂ ಸಾಕೆನಿಸಿದರೆ, ಒಂದು ಕವಿತೆಯಿಂದಾದರೂ ಮನ ಕರಗಿದರೆ ಅಷ್ಟೇ ಸಾಕು, ಎನ್ನುವಂತೆ ಸಾವಿರ ಸಾವಿರ […]

ಉತ್ತರ ಕನ್ನಡ

“ವಿ.ಗ.ನಾಯಕರ ಬರಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” : ಪುಸ್ತಕ ಬಿಡುಗಡೆ

ವಿ.ಗ.ನಾಯಕರ ನಾಮಧಾರಿ ಜನಪದ ಸಾಹಿತ್ಯದಲ್ಲಿ ಇತಿಹಾಸ ಕಾಲದ ಅನೇಕ ಘಟನೆಗಳು ಆಧಾರ ಸಹಿತವಾಗಿ ದಾಖಲಾಗಿವೆ. ಕನ್ನಡದ ಅಪರೂಪ ಗ್ರಂಥಗಳಲ್ಲಿ ಇದು ಒಂದಾಗಿದೆ ಎಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಹೇಳಿದರು. ಇತ್ತೀಚೆಗೆ ವಿವೇಕ ನಗರದ ಶಿವರಾಂ ಕಾಂಪ್ಲೆಕ್ಸ್ ನಲ್ಲಿ ನಡೆದ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಮಾಲೆ […]

ದಾಂಡೇಲಿ

ಮಹಿಳೆಯರು ಸ್ವಾವಲಂಭಿಗಳಾಗಬೇಕು: ಸ್ವಾಭಿಮಾನದಿಂದ ಬಾಳಬೇಕು- ದೇಶಪಾಂಡೆ

(ಎಲ್.ಎಸ್. ಗಸ್ತಿ ಪೌಂಡೇಷನ ಮಹಿಳಾ ಸಮಾವೇಶ ) ದಾಂಡೇಲಿ: ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದರು. ಆದರೆ ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳೆ ಸ್ವಾವಲಂಭಿಯಾಗುವ ಜೊತೆಗೆ ಸ್ವಾಭಿಮಾನದಿಂದ ಬಾಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು. ಅವರು ದಾಂಡೇಲಿಯ ಎಲ್.ಎಸ್. […]

ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ

ಬದುಕಲೇಬೇಕೆಂದಿದ್ದರೆನಡೆಯಿರಿ ತಲೆ ಮೇಲೆತ್ತಿನಡೆಯಲ್ಲಿ ನುಡಿಯಲ್ಲಿ ತಗ್ಗದಿರಿನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ […]

ಉತ್ತರ ಕನ್ನಡ

ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದ ಪ್ರಯೋಗ ಶೀಲ ಭಾಗವತ ಉಮಾಮಹೇಶ್ವರ ಭಟ್ಟ

‘ವಿದ್ಯಾ ವಿನಯ ಸಂಪನ್ನೆ’ ಎನ್ನುವ ವಿನಯಶೀಲತೆಗೆ ಹೆಸರಾಗಿ ಯಕ್ಷಗಾನ ಕಲೆಯ ಬಗ್ಗೆ ಪರಿಪೂರ್ಣ ಅರಿವಿನೊಂದಿಗೆ ಮುನ್ನಡೆದು ಬದುಕಿನ ಬಹುಪಾಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಡದ ಭಾಗವತರೆಂದೇ ಪ್ರಖ್ಯಾತರಾದವರು ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟ. ಬಡಗಿನ ರಂಗಭೂಮಿಯಲ್ಲಿ ಪ್ರಯೋಗಶೀಲತಾ ದೃಷ್ಟಿಕೋನದ ಪಾರಂಪರಿಕ ಜಾನಪದ […]

ಉತ್ತರ ಕನ್ನಡ

ಜನೇವರಿ 20 ರಂದು ಅಂಕೋಲೆಯಲ್ಲಿ ಸಾಹಿತ್ಯ ಸಮ್ಮೇಳನ

ಅಂಕೋಲಾ ತಾಲೂಕಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 20, ಶುಕ್ರವಾರದಂದು ಅಂಕೋಲೆಯ ನಾಡವರ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಕರ್ನಾಟಕದ ಎರಡನೆಯ ಬಾರ್ಡೋಲಿ ಎಂಬ ಹೆಗ್ಗಳಿಕೆ ಹೊಂದಿರುವ, ರೈತ ಹೋರಾಟದ ಮೂಲಕ ಚಳುವಳಿಯ ಗಟ್ಟಿತನ ತೋರಿರುವ, ಕರಿ ಇಷಾಡ ಮಾವಿನ ಹಣ್ಣಿನ ಮೂಲಕ ವಿಶ್ವದ ಗಮನ ಸೆಳೆದಿರುವ, […]

ಉತ್ತರ ಕನ್ನಡ

ಶನಿವಾರವೂ ಪೂರ್ತಿ ದಿನ ಶಾಲೆ: ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸುತ್ತೋಲೆ

ದಾಂಡೇಲಿ: ಅತಿವೃಷ್ಠಿಯಿಂದ ಶಾಲೆಗಳಿಗೆ ನೀಡಿದ್ದ ರಜಾ ದಿನಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಅಗಸ್ಟ್ 13 ರಿಂದ ಸೆಪ್ಟಂಬರ 03 ರವರೆಗೆ ಬರುವ ಶನಿವಾರದಂದು ಪೂರ್ತಿ ದಿನ ಶಾಲೆ ನಡೆಸುವಂತೆ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಅತಿಯಾದ ಮಳೆ ಹಾಗೂ ನೆರೆಯ ಸಂದರ್ಭದಲ್ಲಿ ನೀಡಿದ್ದ ರಜೆಗಳನ್ನು ಮಕ್ಕಳ ಶೈಕ್ಷಣಿಕ ಹಿತ […]