ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮತ್ತೋರ್ವ ಕೊರೊನಾಕ್ಕೆ ಬಲಿ: ಶುಕ್ರವಾರ …

ದಾಂಡೇಲಿಯಲ್ಲಿ ಶುಕ್ರವಾರ 9 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಇಲ್ಲಿವರೆಗೆ 859 ಪ್ರಕರಣಗಳು ದಾಖಲಾಗಿವೆ. ಗುರುವಾರ 19 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಗುರುವಾರ ಕಾರವಾರದಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ದಾಂಡೇಲಿಯ ವ್ಯಕ್ತಿಯೋರ್ವ ಮೃತ ಪಟ್ಟಿದ್ದಾರೆ. ಇಲ್ಲಿಯ ವರೆಗೆ 10 […]

ಈ ಕ್ಷಣದ ಸುದ್ದಿ

ಹಳಿಯಾಳದ ಶ್ರೀಕಾಂತ ಹೂಲಿ ಇನ್ನಿಲ್ಲ

ಹಳಿಯಾಳ ಪುರಸಭೆಯ ಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರೂ ಆಗಿದ್ದ ಶ್ರೀಕಾಂತ ಹೂಲಿ (73)ಯವರು ದೈವಾಧಿನರಾದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರು ರಾಜಕೀಯ ಅನುಭವಿಗಳಾಗಿದ್ದರು. ರೈತರ ಸೇವಾ ಸಹಕಾರಿ ಸಂಘ, ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಹಳಿಯಾಳ ಮಹಾಗಣಪತಿ ದೇವಸ್ಥಾನ, […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 16 ಜನರಲ್ಲಿ ಕೊರೊನಾ ಸೋಂಕು…

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 16 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಇದರಿಂದಾಗಿ ಒಟ್ಟೂ 741 ಜನರು ದಾಂಡೇಲಿಯಲ್ಲಿ ಸೋಂಕಿಗೊಳಗಾಗಿದ್ದು, 9 ಜನರು ಇದಕ್ಕೆ ಬಲಿಯಾಗಿದ್ದಾರೆ. ಗುರುವಾರ 30 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 538 ಜನರು ಗುಣಮುಖರಾಗಿ […]

ಈ ಕ್ಷಣದ ಸುದ್ದಿ

ನಿವೃತ್ತ ACF ಮುನವಳ್ಳಿ ಇನ್ನಿಲ್ಲ… ದಾಂಡೇಲಿಯಲ್ಲಿ ಕೊರೊನಾಕ್ಕೆ ಮತ್ತೊಂದು ಬಲಿ…!

ದಾಂಡೇಲಿಯ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಮಾಜ ಸೇವಕ ವೈ.ಎನ್. ಮುನವಳ್ಳಿ (62) ಯವರು ಕೊನೆಯುಸಿರೆಳೆದರೆಂದು ತಿಳಿಸಲು ವಿಷಾಧವೆನಿಸುತ್ತದೆ. ಕೆಲದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದು ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಉಸಿರಾಟದ ತೊಂದರೆಯ ಕಾರಣಕ್ಕೆ ಕಾರವಾರದ ಕ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಚೇತರಿಕೆಯಲ್ಲುದ್ದರು. […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ… ವೈದ್ಯರಿಗೂ, ಪೊಲೀಸರಿಗೂ ಸೋಂಕು…

ಅದ್ಯಾಕೋ ಗೊತ್ತಿಲ್ಲ, ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೇ ನಿತ್ಯ ಎರಡಂಕಿಯಲ್ಲಿಯೇ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗುರುವಾರ ನಗರದಲ್ಲಿ ಮತ್ತೆ 25 ಜನರಲ್ಲಿ ಸೋಂಕು ದೃಢವಾಗಿದೆ. ಇದನ್ನೂ ಸೇರಿ ಒಟ್ಟೂ ಸೋಂಕಿತರ ಸಂಖ್ಯೆ 725 ಕ್ಕೆ ಏರಿಕೆಯಾಗಿದೆ. ಗುರುವಾರ ಬೈಲಪಾರ , ಟೌನ್ ಶಿಪ್, ಅಜಾದನಗರ, ಮಾರುತಿನಗರ, ಕೋಗಿಲಬನ, ಹಳೆದಾಂಡೇಲಿ, […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 700 ಕ್ಕೆ ತಲುಪಿದ ಕೊರೊನಾ… ಬುಧವಾರ ಮತ್ತೆ….

ದಾಂಡೇಲಿಯಲ್ಲಿ ನಿತ್ಯ ಹೆಚ್ಚುತ್ತಿರುವ ಕೊರೊನಾ ಬುಧವಾರ ಒಟ್ಟೂ 700 ಕ್ಕೆ ತಲುಪಿದೆ. ಬುಧವಾರ ನಗರದಲ್ಲಿ ಮತ್ತೆ 19 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿಯವರೆಗೆ ಒಟ್ಟೂ 700 ಜನರಲ್ಲಿ ಪಾಸಿಠಿವ್ ಬಂದಂತಾಗಿದೆ. ಬುಧವಾರ ಟೌನ್ ಶಿಪ್, ಪೊಲೀಸ್ ಕ್ವಾಟ್ರಸ್, ಮಾರುತಿ ನಗರ, ಡಿ.ಆರ್.ಟಿ. ಅಜಾದನಗರ ಸೇರಿದಂತೆ ಹಲವೆಡೆಯ ಜನರಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 700 ರ ಸನಿಹಕ್ಕೆ ಬಂದ ಕೊರೊನಾ… ಮಂಗಳವಾರ ಮತ್ತೆ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 700 ರ ಸನಿಹ ತಲುಪಿದೆ. ಮಂಗಳವಾರ ಮತ್ತೆ 15 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಕಿಯವರೆಗೆ 681 ಜನರು ಸೋಂಕಿಗೊಳಗಾದಂತಾಗಿದೆ. ಮಂಗಳವಾರ ಗಣೇಶನಗರ, ಲೆನಿನ್ ರಸ್ತೆ, ಬಾಂಬುಗೇಟ್, ಥರ್ಡ ನಂಬರ ಗೇಟ್, ಹಳೆ ಡಿ.ಆರ್.ಟಿ. ದಾಂಡೇಲಪ್ಪ ನಗರ, […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ…

ಕಳೆದೆರಡು ದಿನ ಒಂದಿಷ್ಟು ನಿರಾಳವೆನಿಸಿದ್ದ ಕೊರೊನಾ ದಾಂಡೇಲಿಯಲ್ಲಿ ಸೋಮವಾರ ಮತ್ತೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಸೋಮವಾರ 21 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ನಗರದ ಟೌನ್ ಶಿಪ್, ಹಳಿಯಾಳ ರಸ್ತೆ, ಗಾಂಧಿನಗರ, ಬಂಗೂರ ನಗರ, ಗಣೇಶನಗರ, ಅಜಾದ ನಗರ, ನಿರ್ಮಲ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 610 ಕ್ಕೆ ತಲುಪಿದ ಕೊರೊನಾ…. ಗುರುವಾರ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೊನಾ ಗುರುವಾರದವರೆಗೆ 610 ಜನರನ್ನು ತನ್ನ ಸೊಂಕಿಗೊಳಪಡಿಸಿಕೊಂಡಿದೆ. ಗುರುವಾರ ದಾಂಡೇಲಿಯಲ್ಲಿ ಮತ್ತೆ 13 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಸವೇಶ್ವರ ನಗರ , ಬಾಂಬೇಚಾಳ, ಹಳಿಯಾಳ ರಸ್ತೆಯ ಜನರಲ್ಲಿ ಸೋಂಕು ದೃಢವಾಗಿದೆ. ಬುಧವಾರ ಯಾರೂ ಬಿಡುಗಡೆಯಾಗಿಲ್ಲ. ಆದರೆ ಗುರುವಾರ ಕೆಲವರು […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮಂಗಳವಾರ ಮತ್ತೆ ಹೆಚ್ಚಿದ ಕೊರೊನಾ ಪಾಸಿಟಿವ್ ಪ್ರಕರಣ…

ದಾಂಡೇಲಿಯಲ್ಲಿ ಕೊರೊನಾ ಓಟ ಮುಂದುವರೆದಿದ್ದು, ಪರೀಕ್ಷೆ ನಡೆಸಿದ ಹಾಗೆ ಪಾಸಿಟಿವ್ ಪ್ರಕರಣಗಳೂ ಸಹ ಹೆಚ್ಚುತ್ತಿರುವುದು ಆತಂಕಕಾರಿಯಾಗುತ್ತಿದೆ. ನಗರದಲ್ಲಿ ಮಂಗಳವಾರ ಮತ್ತೆ 27 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈ ಸೋಂಕು ಬಹುತೇಕ ನಗರವನ್ನು ಆವರಿಸಿರುವ ಜೊತೆಗೆ ನಗರಕ್ಕೆ ಸಮೀಪದ ಗ್ರಾಮೀಣ ಪ್ರದೇಶಕ್ಕೂ ಇತ್ತೀಚೆಗೆ ವ್ಯಾಪಿಸುತ್ತಿರುವುದು ಕಂಡು ಬರುತ್ತಿದೆ. ಮಂಗಳವಾರದ […]