ಶಿರೂರು ಗುಡ್ಡ ಕುಸಿತ : ಉಳವರೆ ಗ್ರಾಮಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ

ಅಂಕೋಲಾ : ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಸಂಪೂರ್ಣವಾಗಿ ನೆಲಸಮಗೊಂಡಿದ್ದ ಉಳವರೆ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ. ವೈ. ರಾಘವೇಂದ್ರ ಅವರು ಅಲ್ಲಿನ ಪರಿಸ್ಥಿತಿಯನ್ನು ಪರಿವೀಕ್ಷಿಸಿದರು.

ಗುಡ್ಡ ಕುಸಿತ ಹಾಗೂ ಅದರಿಂದಾದ ಸಾವು, ನೋವು, ನಷ್ಟಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದ ಬಿ. ವೈ. ವಿಜಯೇಂದ್ರ ಅವರು ಇದೊಂದು ದುರದೃಷ್ಟಕರವಾದ ಘಟನೆಯಾಗಿದೆ. ಇಷ್ಟೊಂದು ಜನ ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವುದು ಬಹಳ ಬೇಸರದ ಸಂಗತಿ ಎಂದರು.

ಗುಡ್ಡ ಕುಸಿತದಿಂದಾಗಿರುವ ಮಣ್ಣು ತೆರುವ ಕಾರ್ಯಚರಣೆ ಇನ್ನಷ್ಟು ವೇಗದಿಂದ ನಡೆಯುವಂತಾಗಬೇಕು. ಮಣ್ಣಿನಡಿಯಲ್ಲಿ ಸಿಕ್ಕಿರುವ ಕೆಲವು ಜನರಿಗಾಗಿ ಶೋಧಕಾರ್ತವನ್ನು ಕ್ಷೀಪ್ರಗತಿಯಲ್ಲಿ ನಡೆಸಬೇಕು. ರಾಜ್ಯ ಸರ್ಕಾರ ಈ ಘಟನೆಯ ಕುರಿತಾಗಿ ಇನ್ನಷ್ಟು ಹೆಚ್ಚಿನ ಕಾಳಜಿಯನ್ನು ತೋರಿಸುವ ಜೊತೆಗೆ ಸಂತ್ರಸ್ತರಿಗೆ ಅವಶ್ಯ ಸವಲತ್ತುಗಳನ್ನು ಮತ್ತು ಪರಿಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಭಾ.ಜ.ಪ. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಶಾಸಕ ದಿನಕರ್ ಶೆಟ್ಟಿ, ಹರತಾಳ ಹಾಲಪ್ಪ ಮಾಜಿ ಶಾಸಕರಾದ ರೂಪಾಲಿ ನಾಯ್ಕ, ಸುನಿಲ್ ಹೆಗಡೆ, ಸುನೀಲ ನಾಯ್ಕ ಮುಂತಾದವರು ಇದ್ದರು

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*