ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ದತ್ತಿ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಲೇಖಕಿಯರ ಸಂಘ 2021 ಮತ್ತು 2022ನೇ ಸಾಲಿನ ದತ್ತಿ ಪ್ರಶಸ್ತಿಗಳು ಪ್ರಕಟಿಸಿದ್ದು ಈ ಬಗ್ಗೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್.ಎಲ್. ಪುಷ್ಪಾ ಪ್ರಕಟಣೆ ನೀಡಿದ್ದಾರೆ

ಸಮಗ್ರ ಸಾಧನೆಗಾಗಿ ಕೊಡುವ ಪ್ರಶಸ್ತಿಗಳು ಈ ಕೆಳಗಿನಂತಿವೆ.

  • ಕಾಕೋಳು ಸರೋಜಮ್ಮ (ಕಾದಂಬರಿ) ಪ್ರಶಸ್ತಿಗೆ 2021 ನೇ ಸಾಲಿನಲ್ಲಿ ಲೀಲಾ‌ ಮಣ್ಣಾಲ ಅವರ ‘ರಾಜ್ಯ ರಾಜಶ್ರೀ ಹ಼ರ್ಷವರ್ಧನ’ ಕಾದಂಬರಿ ಹಾಗೂ 2022 ನೇ ಸಾಲಿಗೆ ಹೆಚ್.ಅರ್.ಸುಜಾತ ಅವರ ‘ಮಣಿಬಾಲೆ’ ಕಾದಂಬರಿಗಳು ಆಯ್ಕೆಯಾಗಿವೆ.
  • ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ) ಪ್ರಶಸ್ತಿಗೆ 2021 ನೇ ಸಾಲಿಗೆ ಡಾ.ಎಸ್. ಸುಧಾ ಅವರ ‘ಮಾನವನ ಅನುವಂಶೀಯ ಕಾಯಿಲೆಗಳು’ ಹಾಗೂ 2022 ನೇ ಸಾಲಿಗೆ ಸುಕನ್ಯಾ ಸೂನಗಳ್ಳಿಯವರ ‘ಬೆಳೆರೋಗಗಳು ಕೀಟಗಳು ಮತ್ತು ಅವುಗಳ ನಿರ್ವಹಣೆ’ ಪುಸ್ತಕವು ಆಯ್ಕೆಯಾಗಿದೆ.
  • ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿಗೆ 2021 ನೇ ಸಾಲಿಗೆ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಮತ್ತು 2022 ನೇ ಸಾಲಿಗೆ ನಳಿನಿ ಟಿ.ಭೀಮಪ್ಪ ಅವರ ‘ಸೆಲ್ಫೀ…..(ನಮ್ನಮ್ದೇ ಪ್ರಪಂಚ) ಆಯ್ಕೆಯಾಗಿದೆ.
  • ಜಿ.ವಿ. ನಿರ್ಮಲ (ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ) ವಿಭಾಗಕ್ಕೆ 2021 ನೇ ಸಾಲಿಗೆ ಗೀತಾ ಶೆಣೈ ಅವರ ‘ಕನಸಿನ ಹೂಗಳು’ ಮತ್ತು 2022 ನೇ ಸಾಲಿಗೆ ಸುಮಂಗಲಾ ಮಮ್ಮಿಗಟ್ಟಿ ಅವರ ‘ಕಥಾ ನವಮಿ.’ ಆಯ್ಕೆಯಾಗಿದೆ.
  • ತ್ರಿವೇಣಿ ಸಾಹಿತ್ಯ ಪುರಸ್ಕಾರ (ಪ್ರಾಯೋಜಕರು – ಸುಧಾಮೂರ್ತಿ ಸಣ್ಣಕಥೆ/ ಕಾದಂಬರಿ)

2021 ನೇ ಸಾಲಿಗೆ ರೇಣುಕಾ ಕೋಡಗುಂಟಿಯವರ ‘ನಿಲುಗನ್ನಡಿ’ ಹಾಗೂ 2022 ನೇ ಸಾಲಿಗೆ ಶೋಭಾ ಗುನ್ನಾಪುರ ಅವರ ‘ಭೂಮಿಯ ಋಣ’ ಆಯ್ಕೆಯಾಗಿದೆ.

  • ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) 2021 ನೇ ಸಾಲಿಗೆ ಎಸ್. ಪಿ. ವಿಜಯಲಕ್ಷ್ಮಿಯವರ ‘ನಕ್ಷತ್ರಗಳ ನೆಲದಲ್ಲಿ’ ಹಾಗೂ 2022 ನೇ ಸಾಲಿಗೆ ಜಯಶ್ರೀ ದೇಶಪಾಂಡೆ ಅವರ ‘ಹಲವು ನಾಡು ಹೆಜ್ಜೆ ಹಾಡು’ ಆಯ್ಕೆಯಾಗಿದೆ.
  • ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ಪ್ರಶಸ್ತಿಗೆ 2021 ನೇ ಸಾಲಿಗೆ ರೇಶ್ಮಾ ಭಟ್ ಅವರ ‘ಲಘುಬಗೆ’, 2022 ನೇ ಸಾಲಿಗೆ ಚಂದ್ರಾವತಿ ಬಡ್ಡಡ್ಕ ಅವರ ‘ಲಘುಬಿಗು’ ಆಯ್ಕೆಯಾಗಿದೆ.
  • ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ) ಪ್ರಶಸ್ತಿಗೆ 2021 ನೇ ಸಾಲಿಗೆ ಶಾಲಿನಿ ಮೂರ್ತಿ ಅವರ ‘ಕಥೆಗಳ ತೋರಣ’, 2022 ನೇ ಸಾಲಿಗೆ ವಾಣಿ ಪೆರಿಯೋಡಿ ಅವರ ‘ಮಕ್ಕಳಿಗಾಗಿ ಸಂವಿಧಾನ’ ಕೃತಿಗಳು ಆಯ್ಕೆಯಾಗಿವೆ.

*. ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿಗೆ 2021 ನೇ ಸಾಲಿಗೆ ಜಯಶ್ರೀ ಸಿ. ಕಂಬಾರ ಅವರ ‘ಹೊಸದಾರಿ’ ನಾಟಕ, 2022 ನೇ ಸಾಲಿಗೆ ಬಿ.ಎಂ. ಭಾರತಿ ಹಾದಿಗೆ ಅವರ ನಿಂ’ಗವ್ವ ನಾಗತಿ ಮತ್ತು ಇತರ ನಾಟಕಗಳು’ ಆಯ್ಕೆಯಾಗಿವೆ.

  • ಜಯಮ್ಮ ಕರಿಯಣ್ಣ (ಸಂಶೋಧನೆ) ಪ್ರಶಸ್ತಿಗೆ 2021 ನೇ ಸಾಲಿಗೆ ಡಾ.ವಿಜಯಾದೇವಿ ಅವರ ‘ಅಲ್ಲಮ‌ ಪ್ರಭುದೇವರು’, 2022 ನೇ ಸಾಲಿಗೆ ಡಾ. ಉಷಾದೇವಿ ಉದಯ ಹಿರೇಮಠ ಅವರ ‘ವಚನೋದ್ಯಾನ’ ಆಯ್ಕೆಯಾಗಿದೆ.

ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) ಪ್ರಶಸ್ತಿಗೆ 2020 ನೇ ಸಾಲಿನಲ್ಲಿ ಶ್ರೀದೇವಿ ಕೆರೆಮನೆಯವರ ‘ಚಿತ್ತಚಿತ್ತಾರ’ (ಕಥಾ ಸಂಕಲನ), ಜಯಂತಿ ಚಂದ್ರಶೇಖರ ಅವರ ‘ವಸುಂಧರ’ (ಕಾದಂಬರಿ), ಮಮತಾ ವಾರನಹಳ್ಳಿಯವರ ‘ಕಾಡು ಮಲ್ಲಿಗೆ’ (ಕಾದಂಬರಿ),

2021 ನೇ ಸಾಲಿನಲ್ಲಿ ಆಶಾ ರಘು ಅವರ ‘ಮಾಯೆ’ ( ಕಾದಂಬರಿ) ಅಕ್ಷತಾ ಕೃಷ್ಣಮೂರ್ತಿ ಅವರ ‘ಅಬ್ಬೋಲಿ’ (ಕಥಾ ಸಂಕಲನ), ನೂರ್ ಜಹಾನ್ ಹೊಸಪೇಟೆ ಅವರ ‘ ಅನಾಥೆ’ (ಕಥಾಸಂಕಲನ),

2022 ನೇ ಸಾಲಿಗೆ ಮಾಲತಿ ಹೆಗಡೆಯವರ ‘ಅವನಿ’ (ಕಥಾ ಸಂಕಲನ), ಅರ್ಪಣ. ಎಚ್.ಎಸ್ ಅವರ ‘ಕೆಂಪು ಹಾಗೂ ಇತರ ಬಹುಮಾನಿತ ಕಥೆಗಳು’ ಮತ್ತು ಗಾಯತ್ರಿ ರಾಜ್ ಅವರ ‘ಟ್ರಾಯ್’ (ಕಾದಂಬರಿ). ಹೀಗೆ ಅನುಕ್ರಮವಾಗಿ ಮೂರೂ ವರ್ಷದ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

  • ಉಷಾ. ಪಿ.ರೈ (2022 ನೇ ವರ್ಷಗಳಲ್ಲಿ ಪ್ರಕಟವಾದ ಆತ್ಮಕಥೆ / ಸ್ಮೃತಿ ಚಿತ್ರ ಲೇಖನಗಳು)

2022ರಲ್ಲಿ ಪ್ರಕಟವಾದ ಎಲ್.ಸಿ.‌ಸುಮಿತ್ರ ಅವರ ‘ಅಂಗೈ ಅಗಲದ ಆಕಾಶ’ ಆಯ್ಕೆಯಾಗಿದೆ.

  • ನಿರುಪಮಾ (ಕತೆಗಳು) ಪ್ರಶಸ್ತಿಗೆ 2022 ನೇ ಸಾಲಿನಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ಕಾವ್ಯ ಎಸ್. ಮನಮನೆಯವರ ‘ಆನುದೇವಾ ಹೊರಗಣವಳು’ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಮುದ್ರಿತವಾದ ಅಕ್ಷತಾ ರಾಜ್ ಪೆರ್ಲ ಅವರ ‘ಸುಳಿ ಕಂಡ ಸುಕ್ಕು’ ಕತೆಗಳು ಆಯ್ಕೆಯಾಗಿವೆ.

ಸಮಗ್ರ ಸಾಧನೆಗಾಗಿ ಕೊಡುವ ಪ್ರಶಸ್ತಿಗಳು ಈ ಕೆಳಗಿನಂತಿವೆ.
ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ ಅನುಕ್ರಮವಾಗಿ 2020 ನೇ ಸಾಲಿಗೆ ಕೊಪ್ಪಳದ ಡಾ.ಮಮ್ತಾಜ್ ಬೇಗಂ,

2021 ನೇ ಸಾಲಿಗೆ ತುಮಕೂರಿನ ರಂಗಮ್ಮ ಹೊದೇಕಲ್ಲು ಹಾಗೂ 2022 ನೇ ಸಾಲಿಗೆ ಶಿರಸಿಯ ಮಾಧವಿ ಭಂಡಾರಿಯವರು ಆಯ್ಕೆಯಾಗಿದ್ದಾರೆ.

ಶ್ರೀಲೇಖಾ ( ಭಾಷಾಂತರ ಸಾಹಿತ್ಯ) 2021ನೇ ಸಾಲಿಗೆ ನಾಗರೇಖಾ ಗಾಂವ್ಕರ್ ಅವರ ‘ದಿ ಡೈರಿ ಆಫ್ ಎ ಯಂಗ್ ಗಲ್೯’ ಕೃತಿ, 2022 ನೇ ಸಾಲಿಗೆ ಮಾಲತಿ‌ ಮುದಕವಿಯವರ ‘ಫಾಸಿಗೆ ಸಾಕ್ಷಿ’ ಕೃತಿಗಳು ಆಯ್ಕೆಯಾಗಿವೆ.

ಪ್ರೇಮಾ ಭಟ್ ಮತ್ತು ಎ.ಎಸ್.ಭಟ್ ದತ್ತಿ (ಪ್ರಕಾಶಕಿ ಮತ್ತು ಲೇಖಕಿ) ಪ್ರಶಸ್ತಿಗೆ 2020ನೇ ಸಾಲಿಗೆ ಸಂಕ್ರಮಣ ಪ್ರಕಾಶನ ಸಂಸ್ಥೆಯ ನೀಲಾಪಾಟೀಲ, 2021ನೇ ಸಾಲಿಗೆ ಮಹಿಳಾ ಸಾಹಿತ್ಯಕ ಹುಬ್ಬಳ್ಳಿ ಪ್ರಕಾಶನದ ಹನುಮಾಕ್ಷಿ ಗೋಗಿ, 2022 ನೇ ಸಾಲಿಗೆ ಕವಿ ಪ್ರಕಾಶನದ ಡಾ.ಎಚ್.ಎಸ್.ಅನುಪಮಾ ಅವರು ಆಯ್ಕೆಯಾಗಿದ್ದಾರೆ.

ಸಂಘದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯಲ್ಲಿ ಈ ಮೇಲಿನ ಕೃತಿಗಳನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.

ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ಎಂ.ಎಸ್.ಆಶಾದೇವಿ, ಡಾ.ಬೈರಮಂಗಲ ರಾಮೇಗೌಡ ಹಾಗೂ ಚಂದ್ರಿಕಾ ಪುರಾಣಿಕ ಇವರುಗಳು ಇದ್ದರು.

ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಸಮಾರಂಭವು ಇದೇ ತಿಂಗಳ 23 ರಂದು (23.07.2023) ನಯನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಹಾಗೂ ಮಾಜಿ ಸಚಿವೆ ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರ ಜೊತೆಗೆ ಸಂಘದ 2020ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್. ಎಲ್. ಪುಷ್ಪಾ ರವರು ಪ್ರಕಟಿಸಿದ್ದಾರೆ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*