ಅವಳು ಹಚ್ಚಿಟ್ಟ ಹೋದ…..

ಎನ್ಲ್ಎಲ್.‌ ನಾಯ್ಕರ ಕವಿತೆ

ಅವಳು ಹಚ್ಚಿಟ್ಟು ಹೋದ
ದೀಪದ ತಂಬೇಳಕಿನಡಿ
ಇಂದಿಗೂ ಕಾದು ಕುಳಿತ್ತಿದ್ದೇನೆ
ಅವಳಿಗಾಗಿ
ಅವಳ ಬರುವಿಕೆಗಾಗಿ….
.

ಅವಳು ಜೊತೆಗಿಟ್ಟು ಹೋದ
ಹೆಜ್ಜೆ ಗೆಜ್ಜೆಗಳ ನಾದಲೆಗಳಲ್ಲಿ
ಇಂದಿಗೂ ಅಲೆಮಾರಿಯಂತೆ ಅಲೆಯುತ್ತಿದ್ದೇನೆ
ಅವಳಿಗಾಗಿ
ಅವಳ ಅಂತರರುಹುವಿಗಾಗಿ

ಅವಳು ಮುತ್ತಿಟ್ಟು ಹೋದ
ನೆನಪುಗಳ ಮೂಟೆ ಹೊತ್ತು
ಇಂದಿಗೂ ಬಿಡದೆ ಹಿಂಬಾಲಿಸುತ್ತಿದ್ದೇನೆ
ಅವಳಿಗಾಗಿ
ಅವಳ ಸನಿಹಗಾಗಿ…..

ಅವಳು ಬಿಟ್ಟು ಹೋದ
ಪಿಸು ನುಡಿಗಳ ತಕ್ಕೆಯೊಳಗೆ
ಇಂದಿಗೂ ಉಸಿರಿಟ್ಟು ಉಸುರುತ್ತಿದ್ದೇನೆ
ಅವಳಿಗಾಗಿ
ಅವಳ ಪ್ರೀತಿಗಾಗಿ……

ಎನ್.ಎಲ್.ನಾಯ್ಕ ,ದಾಂಡೇಲಿ

ಲೇಖಕರ ಪರಿಚಯ: ವೃತ್ತಿಯಲ್ಲಿ ಕ್ರಿಯಾಶೀಲ ಶಿಕ್ಷಕರಾಗಿರುವ ಎನ್.ಎಲ್.‌ ನಾಯ್ಕ ಪ್ರವೃತ್ತಿಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಇವರ ಮಕ್ಕಳ ಕಥಾಸಂಕಲನ, ಕವನ ಸಂಕಲನ ಸೇರಿದಂತೆ ನಾಲ್ಕಾರು ಕೃತಿಗಳು ಪ್ರಕಟವಾಗಿವೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*