ವರ್ತಮಾನ

ದಾಂಡೇಲಿಯಲ್ಲಿ 10 ದಿನ ಲಾಕ್‍ಡೌನ್ ಮಾಡಿ: ಭಾ.ಜ.ಪ ಮನವಿ

ದಾಂಡೇಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಾಂಡೇಲಿ ನಗರವನ್ನು ಕನಿಷ್ಠ 10 ದಿನವಾದರೂ ಲಾಕ್‍ಡೌನ್ ಮಾಡುವ ಮೂಲಕ ಹೆಚ್ಚುತ್ತಿರುವ ಸೋಂಕನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ದಾಂಡೇಲಿಯ ಭಾರತೀಯ ಜನತಾ ಪಕ್ಷ ಒತ್ತಾಯಿಸಿದೆ.ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಶೈಲೇಶ ಪರಮಾನಂದ ಅವರ ಮೂಲಕ […]

ದಾಂಡೇಲಿ

ದಾಂಡೇಲಿಯಲ್ಲಿ ಏಳು ದಿನ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡಿ…

ದಾಂಡೇಲಿ; ನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ಹೆಚ್ಚುತ್ತಿರುವುದರಿಂದ ಅದರ ನಿಯಂತ್ರಣಕ್ಕಾಗಿ, ನಗರದ ಹಿತದೃಷ್ಠಿಯಿಂದ ಏಳುದಿನಗಳ ಕಾಲ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡುವುದೊಳಿತು. ಅದಕ್ಕೆ ನಮ್ಮೆಲ್ಲರ ಸಹಕಾರವಿರುತ್ತದೆ ಎಂದು ನಗರಸಭೆಯ ಸರ್ವಪಕ್ಷದ ಸದಸ್ಯರು ಸಭೆ ಸೇರಿ ತಹಶೀಲ್ದಾರ ಹಾಗೂ ಪೌರಾಯುಕ್ತರನ್ನು ಒತ್ತಾಯಿಸಿದರು. ತಹಶಿಲ್ದಾರ್ ಶೈಲೇಶ ಪರಮಾನಂದ, ಹಾಗೂ ಪೌರಾಯುಕ್ತ ಡಾ. ಸಯ್ಯದ್ […]

ದಾಂಡೇಲಿ

ಅ.ಭಾ.ಸಾ.ಪ. ಸಂಚಾಲಕರಾಗಿ ರೋಶನ್ ನೇತ್ರಾವಳಿ ಪುನರಾಯ್ಕೆ

ದಾಂಡೇಲಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ದಾಂಡೇಲಿ ತಾಲೂಕು ಘಟಕದ ಸಂಚಾಲಕರಾಗಿ ಅರಿವು ಪೌಂಡೇಷನ್‍ನ ಅಧ್ಯಕ್ಷ ರೋಶನ್ ನೇತ್ರಾವಳಿ ಪುನರಾಯ್ಕೆಯಾಗಿದ್ದಾರೆ. ಸಹ ಸಂಚಾಲಕರಾಗಿ ಪತ್ರಕರ್ತ ಸಂದೇಶ್ ಎಸ್.ಜೈನ್ ಅವರು ಆಯ್ಕೆಯಾಗಿದ್ದಾರೆ. ಅ.ಭಾ.ಸಾ.ಪ. ಪ್ರಾಂತ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರ ಉಪಸ್ಥಿತಿಯಲ್ಲಿ ಭಾನುವಾರ […]

ವರ್ತಮಾನ

ದಾಂಡೇಲಿಯಲ್ಲಿ ಗುರುವಾರ 11 ಪಾಸಿಟಿವ ಪ್ರಕರಣ!

ದಾಂಡೇಲಿಯಲ್ಲಿ ಗುರುವಾರ ಮತ್ತೆ 11 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿರುವ ಮಾಹಿತಿಯಿದ್ದು, ಇದರಿಂದ ದಾಂಡೇಲಿಯಲ್ಲಿ 84 ಪ್ರಕರಣಗಳು ದಾಖಲಾದಂತಾಗಿವೆ. ಸೋಂಕಿಗೊಳಗಾಗಿ ಹುಬ್ಬಳ್ಳಿಯ ಕಿಮ್ಸ ಗೆ ದಾಖಲಾಗಿ ಮನೆ ಸೇರಿರುವ ದಾಂಡೇಲಿಯ ಕುಟುಂಭ ಸದಸ್ಯರು ಸೇರಿ ಗುರುವಾರ 11 ಪ್ರಕರಣಗಳು ಪಾಸಿಟಿವ ಬಂದಿರುವ ಮಾಹಿತಿದೆ. ಇನ್ನೂ ಸೋಂಕಿತರ ಸಂಪರ್ಕದಲ್ಲಿದ್ದ 15೦ […]

ದಾಂಡೇಲಿ

ಬುಧವಾರ ದಾಂಡೇಲಿಯಲ್ಲಿ 12 ಜನರಲ್ಲಿ ಪಾಸಿಟಿವ್ !!

ದಾಂಡೇಲಿಯಲ್ಲಿ ಕೊರೋನಾ ಆಕ್ರಮಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನಗರದ 12 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. ಸೊಂಕಿತರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಬುಧವಾರ ಸೋಂಕು ದೃಢ ಪಟ್ಟವರಲ್ಲಿ ಹೆಚ್ಚಿನವರು ಸೋಂಕಿತ ನ್ಯಾಯವಾದಿಯ ಸಂಪರ್ಕಕ್ಕೆ ಬಂದವರೆನ್ನಲಾಗಿದೆ. ಕೆಲವರು ನ್ಯಾಯವಾದಿಗಳ ಹಾಗೂ […]

ದಾಂಡೇಲಿ

ದಾಂಡೇಲಿಯಲ್ಲಿಂದು 22 ಕೊರೊನಾ ಪಾಸಿಟಿವ್ ? ಸಾವಿನಲ್ಲೂ ಸೋಂಕು ದೃಢ ?

ದಾಂಡೇಲಿಯಲ್ಲಿ ಮಂಗಳವಾರ ಕೊರೊನಾ ತನ್ನ ರೌದ್ರಾವತಾರ ತೋರಿಸಿದ್ದು… ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂಗಳವಾರ ಒಂದೇ ದಿನ 22 ಜನರಲ್ಲಿ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ. ಇವರಲ್ಲಿ ಟೌನ್ ಶಿಪ್ ಸ್ವೀಪರ್ ಕ್ವಾಟ್ರಸ್ ನ ಒಂದೇ ಪ್ರದೇಶದ 12 ಜನರಲ್ಲಿ ಸೋಂಕು ದೃಢವಾಗಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. […]

ದಾಂಡೇಲಿ

ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. […]

ವರ್ತಮಾನ

ದಾಂಡೇಲಿಯಲ್ಲಿ ಇಂದು ಮತ್ತೆ ಐದು ಪಾಸಿಟಿವ್

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಐದು ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿಯಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾದಂತಾಗಿದೆ. ಸೋಮವಾರ ಬಂದಿರುವ ಮಾಹಿತಿಯಂತೆ ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದ ನಾಲ್ವರು ಹಾಗೂ ಮಾರುತಿ ನಗರದ ಓರ್ವರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರಲ್ಲಿ […]

ದಾಂಡೇಲಿ

ದಾಂಡೇಲಿಗೆ ರವಿವಾರ ಒಂದಿಷ್ಟು ಸಮಾಧಾನ: ಓರ್ವರಲ್ಲಿ ಮಾತ್ರ ಪಾಸಿಟಿವ್

ಕಳೆದೆರಡು ದಿನಗಳಿಂದ ದಾಂಡೇಲಿಗರನ್ನು ಭಯ ಬೀಳಿಸುತ್ತಿದ್ದ ದಾಂಡೇಲಿಯಲ್ಲಿ ರವಿವಾರ ಒಂದಿಷ್ಟು ಸಮಾಧಾನದ ಸುದ್ದಿ ಬಂದಿದೆ. ರವಿವಾರ ನಗರದ ಓರ್ವರಲ್ಲಿ ಮಾತ್ರ ಕೊರೊನಾ ಸೋಂಕು ದೃಢವಾಗಿದೆ. ನಗರದ 79 ವರ್ಷದ ಹಿರಿಯ ವೈದ್ಯರಲ್ಲಿ ಪಾಸಿಟಿವ್ ವರದಿ ಬಂದಿದ್ದು ಇವರು ಸೊಂಕಿಗೊಳಗಾಗಿರುವ ನ್ಯಾಯವಾದಿ ಜ್ವರ ೈಂದು ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ತಪಾಸಣೆ […]

ಉತ್ತರ ಕನ್ನಡ

ಇಡಗುಂದಿ ಡಬ್ಗುಳಿಯಲ್ಲಿ ಗುಡ್ಡ ಕುಸಿತ: ತಾ.ಪಂ. ಅಧ್ಯಕ್ಷರ ಬೇಟಿ

ಯಲ್ಲಾಪುರ: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಇಂಡಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡಬ್ಗುಳಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತ ಉಂಟಾಗಿದೆ. ಸ್ಥಳಕ್ಕೆ ತಾಲೂಕಾಪಂಚಾಯತ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಭಟ್ ಹಾಗೂ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಶ್ರುತಿ […]