ಈ ಕ್ಷಣದ ಸುದ್ದಿ

ಕೋಗಿಲಬನ ರುದ್ರಭೂಮಿಯಲ್ಲಿ 17 ಲಕ್ಷ ರು. ವೆಚ್ಚದಲ್ಲಿ ಕಾಗದ ಕಾರ್ಖಾನೆಯಿಂದ ನಿರ್ಮಾಣಗೊಂಡ ಶವಸಂಸ್ಕಾರ ಕಟ್ಟಡ

ದಾಂಡೇಲಿ: ಕೊನೆಗೂ ಕೋಗಿಲಬನ ರುದ್ರಭೂಮಿಯಲ್ಲೊಂದು ಸುಸಜ್ಜಿತವಾದ ಶವಸಂಸ್ಕಾರ ಕಟ್ಟಡ ನಿರ್ಮಾಣಗೊಂಡಿದ್ದು, ದಾಂಡೇಲಿಗರ ಬಹುದಿನಗಳ ಬೇಡಿಕೆ ಕಾಗದ ಕಾರ್ಖಾನೆಯವರಿಂದ ಈಡೇರುವಂತಾಗಿದೆ. ದಾಂಡೇಲಿಯಲ್ಲಿ ಪಟೇಲ ನಗರ ಮತ್ತು ಕೋಗಿಲಬನದಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಪಟೇಲನಗರದ ಹಿಂದೂ ರುದ್ರಭೂಮಿಗೆ ನಗರಸಭೆಯಿಂದ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕೋಗಿಲಬನದ ರುದ್ರಭೂಮಿ ಹಲವು ಸೌಕರ್ಯಗಳ ಕೊರತೆಯಿಂದ ಕೂಡಿತ್ತು. […]

ದಾಂಡೇಲಿ

ಸಾಹಿತ್ಯದ ಓದು ಸೃಜನಶೀಲತೆಗೆ ಪ್ರೇರಕ- ಡಾ. ಅಕ್ಕಿ’ ಅಭಿಮತ (ಅಭಿರುಚಿ ಪುಸ್ತಕ ಪ್ರೇಮಿ ಬಳಗ’ ಉದ್ಘಾಟನೆ)

ದಾಂಡೇಲಿ: ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆ ನೀಡುತ್ತದೆ. ಸೂಕ್ಷ್ಮ ಸಂವೇದನಾಶೀಲತೆಯನ್ನು ಕಲಿಸುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ಕಳೆಯುವ ದಾರಿಗಳನ್ನು ತೆರೆಯುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ. ಬಿ.ಎನ್. ಅಕ್ಕಿ ಅಭಿಪ್ರಾಯಪಟ್ಟರು. ಅವರು ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ […]

ದಾಂಡೇಲಿ

ನವರಾತ್ರಿಯ ಏಳು ದಿನ ಅಖಂಡ ಹರಿಕೀರ್ತನ: ದಾಂಡೇಲಿಯಲ್ಲಿ ನಡೆಯುತ್ತಿದೆ ದಿನವಿಡೀ ಭಜನ

ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಏಳುದಿನಗಳ ಕಾಲ ನಡೆಯುವ ಅಖಂಡ ಹರಿಕೀರ್ತನ ಸಪ್ತಾಹ ಹಾಗೂ ಭಜನ ಕಾರ್ಯಕ್ರಮ ದಾಂಡೇಲಿ ಕಾಗದ ಕಂಪನಿಯ ರಂಗನಾಥ ಸಭಾಂಗಣದ ಬಳಿಯಲ್ಲಿ ನವ ಯುವಕ ಸಂಘದ ನೇತೃತ್ವದಲ್ಲಿ ಗುರುವಾರದಿಂದ ಆರಂಭವಾಗಿದೆ. ಇದು ರಾಜಸ್ಥಾನದಿಂದ ಬಳುವಳಿಯಾಗಿ ಬಂದಿರುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಾಗದ ಕಂಪನಿಯಲ್ಲಿ ರಾಜಸ್ಥಾನದ ಜನರು ಸಾಕಷ್ಟು […]

ದಾಂಡೇಲಿ

ಅನ್ನಪ್ರಸಾದವಿಲ್ಲ: ಅಂಗಡಿ-ಮಳಿಗೆಗಳಿಲ್ಲ : ಸರಳ ರೀತಿಯಲ್ಲಿ ನಡೆಯಲಿದೆ ದಾಂಡೇಲಪ್ಪ ಜಾತ್ರೆ: ರಾಮಲೀಲಾ ಉತ್ಸವ

ಅನ್ನಪ್ರಸಾದವಿಲ್ಲ, ಅಂಗಡಿ ಮಳಿಗೆಗಳಿಲ್ಲ. ಮನರಂಜನೆಯಂತೂ ಇಲ್ಲವೇ ಇಲ್ಲ. ಕೇವಲ ದೇವರ ದರ್ಶನಕಷ್ಟೇ ಭಕ್ತರಿಗೆ ಅವಕಾಶ ನೀಡುವ ಮೂಲಕ ಸತ್ಪುರುಷ ದಾಂಡೇಲಪ್ಪ ಜಾತ್ರೆಗೆ ತಾಲೂಕಾಡಳಿತ ಸಮ್ಮತಿ ಸೂಚಿಸಿದೆ. ದಾಂಡೇಲಿ ಹಾಗೂ ಸುತ್ತ ಮುತ್ತಲಿನ ಜನರಿಗೆ ದಾಂಡೇಲಪ್ಪ ಎಂದರೆ ಆರಾದ್ಯ ದೈವ. ಪ್ರತೀ ವಿಜಯಯದಶಮಿಯಂದೇ ನಡೆಯುವ ದಾಂಡೇಲಪ್ಪ ಜಾತ್ರೆ ಜಿಲ್ಲೆಯ ಅತೀ […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಈ ಕ್ಷಣದ ಸುದ್ದಿ

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಿಂದ ಆಕ್ಸಿಜನ್ ಪ್ಲಾಂಟ್: ಕೊರೊನಾತಂಕದಲ್ಲಿ ದಾಂಡೇಲಿಗರಿಗೆ ಕಾಗದ ಕಂಪನಿಯ ಗಿಪ್ಟ್…

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಸರಿ ಸುಮಾರು 90 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ನಿರ್ಮಿಸುವ ಮೂಲಕ ಕೊರೊನಾತಂಕದ ಕಾಲದಲ್ಲಿ ದಾಂಡೇಲಿಯ ಜನರಿಗೆ ಅಮೂಲ್ಯವಾದ ಗಿಪ್ಟ್ ನ್ನು ನೀಡಿದ್ದಾರೆ. ಆಮೂಲಕ ಅವರ ಸಾಮಾಜಿಕ ಬದ್ದತೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ದಾಂಡೇಲಿಯ ಸರಕಾರಿ ಆಸ್ಪತ್ರೆಯ […]

ಈ ಕ್ಷಣದ ಸುದ್ದಿ

ನೊಂದಾಯಿತ ಎಲ್ಲಾ ಕಾರ್ಮಿಕರಿಗೂ ಸರಕಾರದ ಕಿಟ್ ಸಿಗುವಂತಾಗಲಿ: ದೇಶಪಾಂಡೆ

ಬೆವರ ಸುರಿಸಿಯೇ ಬದುಕು ಕಂಡುಕೊಳ್ಳುವ ಹಲವು ವಿಭಾಗದ ಕಾರ್ಮಿಕರೇ ಈ ದೇಶದ ನಿಜವಾದ ಆಧಾರಸ್ಥಂಬಗಳು. ಕಾರ್ಮಿಕರ ದುಡಿಮೆಯೇ ಈದೇಶವನ್ನು ಮುನ್ನಡೆಸುತ್ತಿದೆ. ಹಾಗಾಗಿ ಯಾವುದೇ ಕಾರ್ಮಿಕರೂ ಕೂಡಾ ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು. ಇದೀಗ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡುತ್ತಿರುವ ಕಿಟ್‍ಗಳೂ ಕೂಡಾ ನೊಂದಾಯಿತ ಎಲ್ಲಾ ಕಾರ್ಮಿರಿಗೂ ಸಿಗುವಂತಾಗಬೇಕು  ಎಂದು ಶಾಸಕ […]

ದಾಂಡೇಲಿ

ಅಂಬೇಡ್ಕರರ ಪುತ್ಥಳಿ ಪ್ರತಿಷ್ಠಾಪಿಸೋದು ನನ್ನ ಬದುಕಿನ ಭಾಗ್ಯ ಅಂದುಕೊಂಡಿದ್ದೇನೆ: ದೇಶಪಾಂಡೆ

ಡಾ. ಬಿ.ಆರ್. ಅಂಬೇಡ್ಕರವರು ನಮ್ಮ ದೇಶಕ್ಕೆ ಸಂವಿದಾನ ಕೊಟ್ಟವರು. ಅವರು ಈ ದೇಶದ ಆಸ್ತಿ.  ಅಂತಹ ಮಹಾನ್ ವ್ಯಕ್ತಿಯ  ಪುತ್ಥಳಿ ಪ್ರತಿಷ್ಠಾಪಿಸುವುದು ನನ್ನ ಬದುಕಿನ ಭಾಗ್ಯ ಎಂದು ನಾನು ತಿಳಿದುಕೊಂಡಿದ್ದೇನೆ.  ಅತೀ ಶಿಘ್ರವಾಗಿ ಈ ಕಾರ್ಯ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.  ಅವರು […]

ಈ ಕ್ಷಣದ ಸುದ್ದಿ

ದಾಂಡೇಲಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ದೇಶಪಾಂಡೆ

ಕಳೆದೆರಡು ದಿನಗಳ ಹಿಂದೆ  ಎಡಬಿಡದೇ ಸುರಿದ ಮಳೆ ಹಾಗೂ ತುಂಬಿ ಹರಿದ ಕಾಳಿ ನದಿಯಿಂದ ಹಾನಿಗೊಳಗಾದ ದಾಂಡೇಲಿಯ ಹಲವು ಸ್ಥಳಗಳಿಗೆ ರವಿವಾರ ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳ ಜೊತೆಯಲ್ಲಿ ಬೇಟಿ ನೀಡಿ ಪರಿಶೀಲಿಸಿದರು.   ತುಂಬಿ ಹರಿದ ಆಲೂರು ಕೆರೆ, ಕೆರವಾಡಾ ಕೆರೆಗಳನ್ನು ವೀಕ್ಷಿಸಿದ ಆರ್.ವಿ ದೇಶಪಾಂಡೆಯವರು ದಾಂಡೇಲಪ್ಪ […]

ಈ ಕ್ಷಣದ ಸುದ್ದಿ

ಎಡ ಬಿಡದೇ ಸುರಿದ ಮಳೆ: ದಾಂಡೇಲಿಯಲ್ಲಿ ತುಂಬಿ ಹರಿದ ನದಿ-ನಾಲಾಗಳು: ಮನೆಗಳಿಗೆ ನುಗ್ಗಿದ ನೀರು: ಕಾಳಜಿ ಕೇಂದ್ರದಲ್ಲಿ ಸಂತ್ರಸ್ಥ ಜನರು

ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದಾಗಿ ದಾಂಡೇಲಿಯಲ್ಲಿ ಕಾಳಿ ನದಿ ಸೇರಿದಂತೆ ಸಣ್ಣ ಪುಟ್ಟ ನಾಲಾಗಳೂ ಸಹ ತುಂಬಿ ಹರಿದಿದ್ದು, ಮನೆಗಳೊಳಗೆ ನೀರು ನುಗ್ಗಿ ನೂರಾರು ಜನರು ಸಂಕಷ್ಠಕ್ಕೊಳಗಾಗಿದ್ದು ಸಂಜೆಯ ಹೊತ್ತಿಗೆ ವಾತಾವರಣ ಸಹಜ ಸ್ಥಿತಿಗೆ ಮರಳಿದೆ. ದಾಂಡೇಲಿಯಲ್ಲಿ ಗುರುವಾರದಿಂದಲೇ ಮಳೆ ನಿರಂತವಾಗಿ ಭೋರ್ಗರೆಯುತ್ತಿದೆ. ಪರಿಣಾಮವೆಂವಂತೆ ಜಲಪ್ರವಾಹವೇ […]