ಭಗತ್ ಸಿಂಗ್ ಸ್ಮರಣಾರ್ಥ ಸೆ. 28ರಂದು ರಕ್ತದಾನ ಶಿಬಿರ

ಭಗತ್ ಸಿಂಗ್ ಯುವ ಬಳಗ, ರೋಟರಿ ಮತ್ತು ಲಯನ್ಸ್ ಕ್ಲಬ್, ರಾಜ್ಯ ಸರಕಾರಿ ನೌಕರರ ಸಂಘ, ಬಂಗೂರನಗರ ಪದವಿ ಕಾಲೇಜಿನ NSS ಘಟಕ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 28 ರಂದು ದಾಂಡೇಲಿಯ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹುತಾತ್ಮ ಭಗತ್ ಸಿಂಗ್ 123 ನೇ ಜಯಂತಿಯ ಪ್ರಯುಕ್ತ ರಕ್ತದಾನ ಶಿಬಿರ ನಡೆಯಲಿದೆ.

ಕೋವಿಡ್ 19 ಸುರಕ್ಷಾ ನಿಯಮಗಳೊಂದಿಗೆ ಮುಂಜಾನೆ 9.30 ರಿಂದ ಸಂಜೆ 4.30 ರ ವರೆಗೆ ನಡೆಯಲಿರುವ ಈ ರಕ್ತದಾನ ಶಿಭಿರದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಗತ್ ಸಿಂಗ್ ಯುವ ಬಳಗದ ಸುಧೀರ್ ಶೆಟ್ಟಿ ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*