Site icon ಒಡನಾಡಿ

ಮಹಿಳೆಯರೂ ಸೇರಿ 72 ಜನರಿಂದ ಸ್ವಯಂಪ್ರೇರಿತ ರಕ್ತದಾನ

ದಾಂಡೇಲಿ : ಕೆನರಾ ವೆಲ್ಫೇರ್ ಟ್ರಸ್ಟ್ ಬಿ. ಎಡ್. ಕಾಲೇಜು ದಾಂಡೇಲಿ, ಇನ್ನರ್ ವೀಲ್ ಕ್ಲಬ್ ದಾಂಡೇಲಿ, ಶ್ರೀಗಂಧ ಟ್ರಸ್ಟ್ ದಾಂಡೇಲಿ, ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜನತಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಒಟ್ಟು 72 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಜನತಾ ವಿದ್ಯಾಲಯ ಪ್ರಾಚಾರ್ಯ ಉಪೇಂದ್ರ ಘೋರ್ಪಡೆ, ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಶ್ರೀಗಂಧ ಟ್ರಸ್ಟ್ ಉಪಾಧ್ಯಕ್ಷ ನಾಗೇಶ್ ನಾಯ್ಕ್ ನಿರೂಪಿಸಿದರು. ಶಿಬಿರದ ಕೊನೆಯಲ್ಲಿ ಇನ್ನರ್ ವೀಲ್ ಕ್ಲಬ್ ಮತ್ತು ಪ್ರೇಮ ಬಿಂದು ರಕ್ತ ನಿಧಿ ಕೇಂದ್ರದ ವತಿಯಿಂದ ಗಣ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯೆ ಡಾ. ಸಹನಾ ಸೂರ್ಯವಂಶಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸ್ನೇಹಲ್ ಕಂಬದಕೋಣೆ ಮತ್ತು ಪದಾಧಿಕಾರಿಗಳು, ಶ್ರೀಗಂಧ ಟ್ರಸ್ಟ್ ಅಧ್ಯಕ್ಷ ರಾಜೇಶ್ ತಳೇಕರ್, ಸೇವಾ ಸಂಕಲ್ಪ ತಂಡದ ಸುಧೀರ್ ಶೆಟ್ಟಿ, ವಿನಯ್ ಹುಕ್ಕೇರಿ, ಅರ್ಜುನ್ ಗವಾಸ್ ಮತ್ತು ಪ್ರೇಮ ಬಿಂದು ರಕ್ತ ನಿಧಿ ಕೇಂದ್ರದ ಮ್ಯಾನೆಜಿಂಗ್ ಟ್ರಸ್ಟಿ ವಿ.ಎಂ. ಹಿರೇಮಠ್ ಹಾಗೂ ಸಿಬ್ಬಂದಿ ಇದ್ದರು.

Exit mobile version