Site icon ಒಡನಾಡಿ

ಬಂಗೂರನಗರ ಪದವಿ ಕಾಲೇಜಿನ ಲಕ್ಷ್ಮಿ ಪರಬರಿಗೆ ಪಿಎಚ್.ಡಿ ಪ್ರದಾನ

ದಾಂಡೇಲಿ : ನಗರದ ಬಂಗೂರನಗರ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರೊ. ಲಕ್ಷ್ಮಿ ಪರಬರವರು ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಫೈನಾನ್ಸಿಯಲ್ ಲೆವರೇಜ್ ಚೆಂಜಿಸ್ ಅಸೋಸಿಯೆಟೆಡ್ ವಿಥ್ ಕಾರ್ಪೊರೇಟ್ ಮರ್ಜರ್ಸ ಇನ್ ಇಂಡಿಯಾ” ಎಂಬ ವಿಷಯದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಆರ್.ಎಲ್. ಹೈದ್ರಾಬಾದ ಇವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ್ದರು.

ಇವರ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಲ್. ಗುಂಡೂರ, ಆಡಳಿತ ಮಂಡಳಿಯವರು, ಬೋಧಕ ಹಾಗೂ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಶುಭಾಶಯ ಕೋರಿರುತ್ತಾರೆ.

Exit mobile version